ನಾಲ್ಕು ದಿನಗಳಿಂದ ಸುರಿದ ಅಕಾಲಿಕ ಮಳೆಗೆ ಬೆಳೆ, ಆಸ್ತಿ-ಪಾಸ್ತಿ ಹಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾಲ್ಕು ದಿನಗಳಿಂದ ಎಪಿ ಮತ್ತು ತೆಲಂಗಾಣದ ಹಲವೆಡೆ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆಯಾಗುತ್ತಿದೆ. ತೆಲಂಗಾಣದ ಸಂಗಾರೆಡ್ಡಿ, ಕರೀಂನಗರ, ನಿಜಾಮಾಬಾದ್, ಆದಿಲಾಬಾದ್ ಮತ್ತು ಕಾಮರೆಡ್ಡಿ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಹೈದರಾಬಾದ್‌ನ ಹಲವು ಭಾಗಗಳು ಮಳೆಗೆ ತತ್ತರಿಸಿದೆ.

ಹೈದರಾಬಾದ್‌ನಲ್ಲಿ ಮಧ್ಯರಾತ್ರಿ ಸುರಿದ ಭಾರೀ ಮಳೆಗೆ ಕುತ್ಬುಳ್ಳಾಪುರ, ಕಾಮರೆಡ್ಡಿ ಜಿಲ್ಲೆಯ ಜುಕ್ಕಲ್ ಕ್ಷೇತ್ರದಲ್ಲಿ ರಭಸವಾಗಿ ಬೀಸಿದ ಗಾಳಿಗೆ ರಸ್ತೆಯುದ್ದಕ್ಕೂ ಇದ್ದ ಹೋರ್ಡಿಂಗ್‌ಗಳು ಮತ್ತು ಶೆಡ್‌ಗಳು ನಾಶವಾಗಿವೆ. ಧಾರಾಕಾರ ಮಳೆಯಿಂದಾಗಿ ಜಗಿತ್ಯಾಲ ಜಿಲ್ಲೆಯ ರಸ್ತೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ.

ರಭಸದ ಗಾಳಿಗೆ ದನಗಳ ಶೆಡ್‌ಗಳು ಕೊಚ್ಚಿಹೋಗಿವೆ. ಜಗಿತ್ಯಾಲ ಟವರ್‌ ವೃತ್ತದ ಹೊಸ ಬಸ್‌ ನಿಲ್ದಾಣದಿಂದ ಹಳೆ ಬಸ್‌ ನಿಲ್ದಾಣದವರೆಗೆ ಗಂಜ್‌ ರಸ್ತೆಯಲ್ಲಿ ಚರಂಡಿಗಳು ತುಂಬಿ ಹರಿಯುತ್ತಿವೆ. ಆಲಿಕಲ್ಲು ಮಳೆಯಿಂದ ಆಗಿರುವ ಹಾನಿ ಕುರಿತು ವರದಿ ನೀಡುವಂತೆ ಸ್ಥಳೀಯ ಎಂಎಲ್‌ಎ ಜಿಲ್ಲಾಧಿಕಾರಿ ಅನುರಾಗ್ ತಿಳಿಸಿದರು.

ಕ್ಷೇತ್ರಕ್ಕೆ ಭೇಟಿ ನೀಡಿ ಬೆಳೆ ನಷ್ಟವಾಗಿರುವ ರೈತರ ಪಟ್ಟಿ ಸಿದ್ಧಪಡಿಸುವಂತೆ ಸಚಿವರು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಎಪಿಯಲ್ಲಿ ಅಕಾಲಿಕ ಮಳೆಯಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಅನಂತಪುರ ಜಿಲ್ಲೆಯ ಬೊಮ್ಮನಹಾಳ್ ಮಂಡಲದಲ್ಲಿ ಆಲಿಕಲ್ಲು ಮಳೆಗೆ ಮೆಣಸಿನಕಾಯಿ, ತೊಗರಿ ಬೆಳೆ ಹಾನಿಯಾಗಿದೆ. ಸುಮಾರು 100 ಎಕರೆಯಲ್ಲಿ ಮೆಣಸಿನಕಾಯಿ ಬೆಳೆ, 50 ಎಕರೆಯಲ್ಲಿ ಮೆಕ್ಕೆಜೋಳ ಬೆಳೆ ಹಾನಿಯಾಗಿ ರೈತರು ಕಣ್ಣೀರು ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!