ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ಉತ್ತರಪ್ರದೇಶ ಚುನಾವಣೆ ನಡೆಯಲಿದ್ದು, ನಾಯಕರ ನಡುವೆ ಮಾತಿನ ಸಮರ ತಾರಕಕ್ಕೇರುತ್ತಿದೆ. ನಿನ್ನೆ ಮಧ್ಯರಾತ್ರಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಡುವೆ ಟ್ವಿಟರ್ ವಾರ್ ನಡೆದಿದೆ.
ಯೋಗಿ ಆದಿತ್ಯನಾಥ್ ಟ್ವೀಟ್: ಕೇಳು ಕೇಜ್ರಿವಾಲ್, ಇಡೀ ಜನತೆ ಕೊರೋನಾದಿಂದ ನರಳುತ್ತಿದ್ದಾಗ ನೀವು ಯುಪಿ ಕಾರ್ಮಿಕರು ದೆಹಲಿ ತೊರೆಯಬೇಕು ಅಂದಿರಿ. ಮಧ್ಯರಾತ್ರಿಯಲ್ಲಿ ಹೆಂಗಸರು, ಮಕ್ಕಳು ಬೀದಿಯಲ್ಲಿ ಅಸಹಾಯಕತೆಯಿಂದ ನಿಲ್ಲುವಂತೆ ಮಾಡಿದ್ದೀರಿ. ಇದು ನಿಮ್ಮ ಸರ್ಕಾರದ ಅಮಾನವೀಯ ಕೃತ್ಯ. ನೀವು ಮಾನವ ವಿರೋಧಿ ಎಂದಿದ್ದಾರೆ.
सुनो केजरीवाल,
जब पूरी मानवता कोरोना की पीड़ा से कराह रही थी, उस समय आपने यूपी के कामगारों को दिल्ली छोड़ने पर विवश किया।
छोटे बच्चों व महिलाओं तक को आधी रात में यूपी की सीमा पर असहाय छोड़ने जैसा अलोकतांत्रिक व अमानवीय कार्य आपकी सरकार ने किया।
आपको मानवताद्रोही कहें या…
— Yogi Adityanath (@myogiadityanath) February 7, 2022
ಕೇಜ್ರಿವಾಲ್ ಟ್ವೀಟ್: ಕೇಳು ಯೋಗಿ, ಯುಪಿಯ ಜನರ ಮೃತದೇಹಗಳು ನದಿಯಲ್ಲಿ ಹರಿಯುತ್ತಿದ್ದಂತೆಯೇ ಅದನ್ನು ಮುಚ್ಚುವ ಪ್ರಯತ್ನ ಮಾಡಿದ್ದೀರಿ. ಕೋಟಿಗಟ್ಟಲೆ ಹಣ ಖರ್ಚು ಮಾಡಿ, ಟೈಮ್ಸ್ ಮ್ಯಾಗಜಿನ್ನಲ್ಲಿ ನಿಮ್ಮ ಸುಳ್ಳು ಚಪ್ಪಾಳೆ ಜಾಹೀರಾತು ಕೊಟ್ಟಿದ್ದೀರಿ. ನಿಮ್ಮಂತಹ ಕ್ರೂರಿ ಮತ್ರು ಕ್ರೂರ ಆಡಳಿತಗಾರ ನಾನೆಲ್ಲೂ ಕಂಡಿಲ್ಲ ಎಂದು ಹೇಳಿದ್ದಾರೆ.
सुनो योगी,
आप तो रहने ही दो। जिस तरह UP के लोगों की लाशें नदी में बह रहीं थीं और आप करोड़ों रुपए खर्च करके Times मैगज़ीन में अपनी झूठी वाह वाही के विज्ञापन दे रहे थे। आप जैसा निर्दयी और क्रूर शासक मैंने नहीं देखा। https://t.co/qxcs2w60lG
— Arvind Kejriwal (@ArvindKejriwal) February 7, 2022