ಕೇಂದ್ರ ಸರ್ಕಾರದಿಂದ ರಾಜ್ಯಪಾಲರ ಬಳಕೆ: ಡಿ.ಕೆ.ಶಿವಕುಮಾರ್ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದರು.

ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರ ನೋಟಿಸ್ ಸಂಬಂಧ ಕ್ಯಾಬಿನೆಟ್ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಅಬ್ರಹಾಂ ಅವರು ದೂರು ಕೊಟ್ಟ ದಿನವೇ ರಾಜ್ಯಪಾಲರು ಸಿಎಸ್ ಬಳಿ ವರದಿ ಕೇಳಿದ್ದಾರೆ. ಸಂವಿಧಾನದ ಕಗ್ಗೊಲೆ, ಪ್ರಜಾಪ್ರಭುತ್ವಕ್ಕೆ ಮಾರಕ ಆಗುವ ಪರಿಸ್ಥಿತಿ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ. ಕಾನೂನು ಮತ್ತು ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ ಕೇಂದ್ರ ಸರ್ಕಾರ ರಾಜ್ಯಪಾಲರನ್ನ ಬಳಸಿಕೊಂಡಿದೆ ಎಂದು ಹರಿಹಾಯ್ದರು.

ಅಬ್ರಾಹಂ ಜೂನ್ 26ರಂದು ದೂರು ಕೊಡ್ತಾರೆ. ಜುಲೈ 5ರಂದು ಮುಖ್ಯ ಕಾರ್ಯದರ್ಶಿಗೆ ರಿಪೋರ್ಟ್ ಕೇಳಿರ್ತಾರೆ. ಜುಲೈ 15ರಂದು ಮತ್ತೆ ಸಿಎಸ್‌ಗೆ ಪತ್ರ ಬರೆಯುತ್ತಾರೆ. ರಾಜ್ಯ ರೈತ ಸಂಘಗಳ ಒಕ್ಕೂಟ ದೂರು ಕೊಟ್ಟಿದೆ. ಮುಡಾದಿಂದ ಸೈಟ್‌ಗಳ ಅನಧಿಕೃತ ಹಂಚಿಕೆ ಬಗ್ಗೆ ದೂರು ಕೊಡ್ತಾರೆ. ನ್ಯಾಯಾಂಗ ತನಿಖೆಗೆ ಆಗ್ರಹಿಸಿ ದೂರು ಕೊಡ್ತಾರೆ. ಅದಕ್ಕೆ ವಿವರಣೆ ಕೇಳಿ ಪತ್ರ ಬರೆಯುತ್ತಾರೆ. ರಾಜ್ಯಪಾಲರಿಗೆ ಡಿಟೇಲ್ ವರದಿ ಕೊಟ್ಟು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ವಹಿಸುತ್ತಾರೆ. ಅದಾದ ಬಳಿಕ ಅಬ್ರಾಹಂ ಜುಲೈ 26ರಂದು ದೂರು ಕೊಡ್ತಾರೆ. ಅವತ್ತೇ ಸಿಎಂ ಸಿದ್ದರಾಮಯ್ಯಗೆ ನೊಟೀಸ್ ಕೊಡ್ತಾರೆ. 7 ದಿನಗಳ ಒಳಗಾಗಿ ಉತ್ತರಿಸುವಂತೆ ನೊಟೀಸ್ ಕೊಡ್ತಾರೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಯಾವ ಯಾವ ಸರ್ಕಾರ ಇದ್ದಾಗ ಏನೇನು ತೀರ್ಮಾನ ಆಗಿದೆ ಎಂಬ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿದ್ದೇವೆ. 150 ಪೇಜ್ ಇದೆ. ಅದನ್ನ ಓದೋಕೆ ಎಷ್ಟು ಟೈಂ ಬೇಕು ಅಂತಾ ಗೊತ್ತು. ಇಷ್ಟು ಬೇಗ ನೊಟೀಸ್ ಕೊಡ್ತಾರೆ ಅಂದ್ರೆ ಏನು ಅರ್ಥ? 7 ದಿನ ಆಗ್ತಿದೆ ನೊಟೀಸ್ ಕೊಟ್ಟು. ನಿಮ್ಮ ಮೇಲೆ ಪ್ರಾಸಿಕ್ಯೂಶನ್‌ಗೆ ಏಕೆ ಕೊಡಬಾರದು ಎಂದು ನೊಟೀಸ್ ಕೊಟ್ಟಿದ್ದಾರೆ. ನಿಮ್ಮ ಮೇಲೆ, ನಿಮ್ಮ ಕುಟುಂಬದ ವಿರುದ್ಧ ಅಕ್ರಮದ ಆರೋಪ ಇದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲು ಆಗಬೇಕು ಅಂತಾ ದೂರು ಬಂದಿದೆ. ವಿವರಣೆ ಕೊಡಿ ಎಂದು ಶೋಕಾಸ್ ನೊಟೀಸ್ ಕೊಟ್ಟಿದ್ದಾರೆ. ರಾಜ್ಯಪಾಲರು ಮುಖ್ಯಕಾರ್ಯದರ್ಶಿ ವರದಿ ಪರಿಶೀಲನೆ ಮಾಡದೇ ಹೇಗೆ ಶೋಕಾಸ್ ನೊಟೀಸ್ ಅವತ್ತೇ ಕೊಡ್ತಾರೆ ಎಂದು ಡಿಕೆಶಿ ಪ್ರಶ್ನಿಸಿದರು.

ರಾಜ್ಯಪಾಲರು ಸಿಎಂ ಅವರಿಗೆ ಶೋಕಾಸ್ ನೊಟೀಸ್ ಕೊಟ್ಟಿರುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿದ್ದೇವೆ. ಅದಕ್ಕೆ ನಾವು ಮಂತ್ರಿ ಪರಿಷತ್ ಸಭೆ ನಡೆಸಿದ್ದೇವೆ. ಸಿಎಂ ಸಿದ್ದರಾಮಯ್ಯ ಬಿಟ್ಟು ನನ್ನ ಅಧ್ಯಕ್ಷತೆಯಲ್ಲಿ ಮಂತ್ರಿ ಪರಿಷತ್ ಸಭೆ ನಡೆಸಿದ್ದೇವೆ. ರಾಜ್ಯಪಾಲರಿಗೆ ಸಲಹೆ ನೀಡಿ ನಿರ್ಣಯ ತೆಗೆದುಕೊಂಡಿದ್ದೇವೆ. ಸಿಎಂಗೆ ರಾಜ್ಯಪಾಲರು ತಮ್ಮ ನೊಟೀಸ್ ವಾಪಸ್ ಪಡೆಯಬೇಕು ಎಂದು ನಿರ್ಣಯವಾಗಿದೆ. ಮತ್ತೆ ಟಿ.ಜೆ.ಅಬ್ರಾಹಂ ದೂರನ್ನ ವಜಾಗೊಳಿಸಬೇಕು ಎಂದು ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!