SHOCKING VIDEO| ಗೂಳಿಯ ದ್ವೇಷ, 2ಗಂಟೆಗಳ ಕಾಲ ಮರದ ಮೇಲೆಯೇ ನಿಂತ ರೈತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗೂಳಿಯೊಂದು ರೈತನ ಬೆನ್ನು ಬಿದ್ದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಇರಿಯಲು ಗೂಳಿಯೊಂದು ಓಡಿ ಬಂದಾಗ ಎಚ್ಚೆತ್ತ ರೈತ ಅದರಿಂದ ಪ್ರಾಣ ಉಳಿಸಿಕೊಳ್ಳಲು ಮರಕ್ಕೆವೇರಿದರು. ಎರಡು ಗಂಟೆ ಕಳೆದರೂ ಗೂಳಿ ಆ ಸ್ಥಳದಿಂದ ತೆರಳದೆ ಅಲ್ಲಿಯೇ ಕಾದು ಕುಳಿತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲಲಿ ಸದ್ದು ಮಾಡುತ್ತಿದೆ.

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಶುಕ್ರವಾರ ನಡೆದ ಈ ಘಟನೆ ನೋಡುಗರನ್ನು ಬೆಚ್ಚಿಬೀಳಿಸಿದೆ. ಖಖ್ನು ಎಂಬ ರೈತನ ಹಿಂದೆ ಬಿದ್ದ ಗೂಳಿ ಬೆಂಬಿಡದೆ ಕಾಡಿದೆ. ಈ ಘಟನೆಯನ್ನು ಪಕ್ಕದಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾರಣ,  ಈ ಗೂಳಿ ಕಳೆದ ಕೆಲ ದಿನಗಳಲ್ಲಿ 12 ಮಂದಿಯನ್ನು ಗಾಯಗೊಳಿಸಿದೆಯಂತೆ.

ಇಂತಹ ಗೂಳಿಗಳನ್ನು ತಡೆಯಲು ಬುಲ್ ಪ್ರೊಟೆಕ್ಷನ್ ಪೊಲೀಸರನ್ನು ರಚಿಸುವಂತೆ ಅಖಿಲೇಶ್ ಯಾದವ್ ಯುಪಿ ಸರ್ಕಾರಕ್ಕೆ ಮನವಿ ಮಾಡಿದರು. ಸದ್ಯ ರೈತನ ಹಿಂದೆ ಬಿದ್ದ ಗೂಳಿಯನ್ನು ಹಿಡಿಯಲು ಗುಂಪು ರಚನೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!