SHOCKING | ವಂದೇ ಭಾರತ್ ರೈಲು ಪ್ರಯಾಣಿಕ ತಿಂತಿದ್ದ ತಿಂಡಿಯಲ್ಲಿ ಜಿರಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕೇಟರಿಂಗ್ ನೀಡಿದ ತಿಂಡಿಯಲ್ಲಿ ಜಿರಳೆ ಕಾಣಿಸಿದೆ.

ಹೌದು, ಭೋಪಾಲ್‌ನ ರಾಣಿ ಕಮಲಾಪತಿಯಿಂದ ದೆಹಲಿಯ ಹಜರತ್ ನಿಜಾಮುದ್ದೀನ್‌ಗೆ ತೆರಳುತ್ತಿದ್ದ ಒಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಲಘು ಉಪಹಾರದಲ್ಲಿ ಜಿರಳೆ ಸಿಕ್ಕಿದೆ.

ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಟೂರಿಸಂ ಕಾರ್ಪೋರೇಷನ್ ಈ ಉಪಹಾರ ನೀಡಿದ್ದು, ಜಿರಳೆ ನೋಡಿ ಪ್ರಯಾಣಿಕ ಶಾಕ್ ಆಗಿದ್ದಾನೆ. ತಕ್ಷಣವೇ ಜಿರಳೆಯ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ತಕ್ಷಣ ಅಧಿಕಾರಿಗಳು ಪ್ರಯಾಣಿಕರನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ಪರ್ಯಾಯ ಆಹಾರ ನೀಡಿ, ಅಡುಗೆ ಪರವಾನಗಿದಾರರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!