ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸುಮಾರು ಒಂದು ಗಂಟೆ ಕಾಲ ಧಾರಾಕಾರ ಮಳೆ ಸುರಿದಿದೆ.
ಸಂಜೆ 4 ಸುಮಾರಿಗೆ ಆರಂಭವಾದ ಮಳೆ 5.30 ರವರೆಗೆ ಧಾರಾಕಾರವಾಗಿ ಮಳೆ ಸುರಿದಿದೆ, ಚಿಕ್ಕಮಗಳೂರು ತಾಲೂಕಿನ ಕೆರೆಮಕ್ಕಿ, ಹಂಗರವಳ್ಳಿ, ಬೈಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲೂ ಮಳೆಯಾಗಿದೆ.
ಸುಮಾರು ಒಂದು ಗಂಟೆ ಕಾಲ ಸುರಿದ ಭಾರಿ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಲೆನಾಡಿನ ಹಳ್ಳಿಗಳಲ್ಲಿ ಜನರಿಗೆ ತುರ್ತಾಗಿ ಕುಡಿಯುವ ನೀರು ಬೇಕಾಗಿದ್ದು. ನದಿ ಕಣಿವೆಗಳು ಮತ್ತು ಸರೋವರಗಳ ದಡಗಳು ನೀರಿಲ್ಲದೆ ಒಣಗಿವೆ.
ಮೂಡಿಗೆರೆಯಂತಹ ಮಳೆ ಊರಲ್ಲೂ ಜನರು ಕುಡಿಯುವ ನೀರು ತರಲು ಟ್ಯಾಂಕರ್ ಮೊರೆ ಹೋಗಿದ್ದರು. ಸದ್ಯ ಮಲೆನಾಡಿನಲ್ಲಿ ಮಳೆಯಾಗುತ್ತಿದ್ದು, ಇದೆ ರೀತಿ ಮಳೆಯನ್ನೇ ಧಾರೆ ಎರೆಯಲಿ ಎಂದು ವರುಣದೇವನಿಗೆ ಜನರು ಕೈ ಮುಗಿಯುತ್ತಿದ್ದಾರೆ.