ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಅಶೋಕ್ ರಾವ್ ನಿಧನರಾಗಿದ್ದಾರೆ.
ಕ್ಯಾನ್ಸರ್ನಿಂದ ಅಶೋಕ್ ಅವರು ಬಳಲುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು.
ವಿದ್ಯಾರಣ್ಯಪುರದ ತಮ್ಮ ನಿವಾಸದಲ್ಲಿಯೇ ಅಶೋಕ್ ಅವರು ಕೊನೆಯುಸಿರೆಳೆದಿದ್ದಾರೆ. ಅಶೋಕ್ ಅವರ ಅಗಲಿಕೆಗೆ ಸ್ಯಾಂಡಲ್ವುಡ್ ಕಂಬನಿ ಮಿಡಿದಿದೆ. ನೂರಾರು ಕನ್ನಡ ಚಲನಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ಅಶೋಕ್ ಅವರು ನಟಿಸಿದ್ದರು. ಪರಶುರಾಮ್ ಚಿತ್ರದಲ್ಲಿ ರಾಜ್ಕುಮಾರ್ ಅವರೇ ಕರೆದು ಅಶೋಕ್ ಅವರನ್ನು ಸಿನಿಮಾಗೆ ವಿಲನ್ ಮಾಡಿಸಿದ್ದರು. ಕಂಚಿನ ಕಂಠದಿಂದ ಮಿನುಗುತ್ತಿದ್ದ ಸ್ಯಾಂಡಲ್ವುಡ್ನ ಮತ್ತೊಂದು ತಾರೆ ಕಣ್ಮರೆಯಾಗಿದೆ ಎಂದು ಸ್ಯಾಂಡಲ್ವುಡ್ ದಿಗ್ಗಜರು ಹೇಳಿದ್ದಾರೆ.