ಹೊಸದಿಗಂತ ವರದಿ,ಕಲಬುರಗಿ:
ಭಾರತೀಯ ಜನತಾ ಪಕ್ಷ ಉತ್ತರ ಮಂಡಲ ವತಿಯಿಂದ ಇಂದು ವಾಡ೯ 30ರಲ್ಲಿ ವಿಜಯ್ ಸಂಕಲ್ಪ ಅಭಿಯಾನಕ್ಕೆ ಕ್ರೆಡೆಲ್ ಅಧ್ಯಕ್ಷ, ಯುವ ಮುಖಂಡ ಚಂದು ಪಾಟೀಲ್ ಚಾಲನೆ ನೀಡಲಿದ್ದಾರೆ ಎಂದು ಉತ್ತರ ಮಂಡಲ ಅಧ್ಯಕ್ಷ ಅಶೋಕ್ ಮಾನಕರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಉತ್ತರ ಮಂಡಲದ ವಾಡ೯ 30ರಲ್ಲಿ ಬೆಳಿಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದು,ಉತ್ತರ ಮಂಡಲದ 2000 ಕಾಯ೯ಕತ೯ರು ಭಾಗಿಯಾಗಲಿದ್ದಾರೆ ಎಂದರು.
ಬೂತನಲ್ಲಿರುವ ಎಲ್ಲ ಮನೆಗಳ ಸಂಪರ್ಕ ಮಾಡುವುದು.ಪ್ರತಿ ಮನೆಗೆ ಸರ್ಕಾರದ ಸಾಧನೆಗಳು ಮತ್ತು ಕರಪತ್ರ ಮತ್ತು ಸ್ಟಿಕ್ಕರ್ ವಿತರಣೆ,ಸದಸ್ಯತ್ವ ಅಭಿಯಾನ ಮಿಸ್ ಕಾಲ ಕೊಡುವ ಮೂಲಕ, ಫಲಾನುಭವಿಗಳ ಸಂಪರ್ಕ, ಪ್ರತೀ ಬೂತ ವ್ಯಾಪ್ತಿಯಲ್ಲಿ 10 ಗೋಡೆ ಬರಹಗಳು ಹಾಗೂ 1 ಡಿಜಿಟಲ್ ಗೋಡೆ ಮಾಡುವುದು ಗೋಡೆ ಬರಹಗಳ ಮಾದರಿಯನ್ನು ರಾಜ್ಯದಿಂದ ಕಳುಹಿಸಲಾಗುವುದು ಎಂದು ಹೇಳಿದರು.
ಅದರ ಜೊತೆಗೆ ಮುಂಬರುವ 29 ರಂದು ಮನ ಕೀ ಬಾತ್ ಮಂಡಲದ ಎಲ್ಲಾ ಬೂತಗಳಲ್ಲಿ ವಿಕ್ಷಣೆ, ಮನೆ ಮನೆಗೆ ಶೌಚಾಲಯ ನಿರ್ಮಾಣ, ವಿದ್ಯುತ್ ಉಜಾಲಾ ಯೋಜನೆ, ಜನಧನ್, ಅನ್ನಭಾಗ್ಯ ಯೋಜನೆ, ಗ್ಯಾಸ್ (ಉಜ್ವಲ ಯೋಜನೆ), ಆಯುಷ್ಮಾನ ಯೋಜನೆ, ಅಟಲ ಪಿಂಚಣಿ ಯೋಜನೆ, ಕಳೆದ 2019 ರಲ್ಲಿ ಕೋವಿಡ್ ಮಹಾಮಾರಿ ಸಮಯದಲ್ಲಿ ಕೋವಿಡ್ ವ್ಯಾಕ್ಸಿನೇಷನ ಯೋಜನೆ, ಇನ್ನೂ ಅನೇಕ ಯೋಜನೆಗಳ ಬಗ್ಗೆ ತಿಳಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ದತ್ತು ಫಡ್ನವೀಸ್, ಶಾಂತು ದುಧನಿ,ವರದಾಶಂಕರ ಶೆಟ್ಟಿ ಸೇರಿದಂತೆ ಹಲವರು ಇದ್ದರು.