ವಿಜಯಪುರ| ಬೈಕ್- ಕಾರ್ ಡಿಕ್ಕಿ: ಬೈಕ್ ಸವಾರ ಸಾವು

ಹೊಸ ದಿಗಂತ ವರದಿ, ವಿಜಯಪುರ:

ಬೈಕ್ ಹಾಗೂ ಕಾರ್ ಡಿಕ್ಕಿಯಾಗಿ, ಬೈಕ್ ಸವಾರ‌ನಾದ ಮಾಜಿ ಗ್ರಾಪಂ ಸದಸ್ಯ ಸಾವಿಗೀಡಾದ ಘಟನೆ ವಿಜಯಪುರ ತಾಲೂಕಿನ ಸಿಂದಗಿ ರಸ್ತೆಯ ಲಕ್ಷ್ಮಿ ದೇವಸ್ಥಾನ ಬಳಿ ನಡೆದಿದೆ.
ಮೃತಪಟ್ಟವನನ್ನು ಹಡಗಲಿ ತಾಂಡಾ ನಿವಾಸಿ ಮೋಹನ್ ತಾರಾಸಿಂಗ್ ರಾಠೋಡ (42) ಎಂದು ಗುರುತಿಸಲಾಗಿದೆ.
ಮೋಹನ್ ರಾಠೋಡ ಈತ, ವಿಜಯಪುರದಿಂದ ಬೈಕ್ ಮೇಲೆ ಹಡಗಲಿ ಎಲ್ ಟಿ ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!