ಹೊಸದಿಗಂತ ವರದಿ ವಿಜಯಪುರ:
ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಡೆಗೋಡೆಗೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿ ಸಾವಿಗೀಡಾದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ಬಳಿ ನಡೆದಿದೆ.
ಮಲಗಲದಿನ್ನಿ ನಿವಾಸಿ ಹಣಮಂತಪ್ಪ ಸೋಮನಾಥ (25) ಮೃತಪಟ್ಟ ವ್ಯಕ್ತಿ.
ಹಣಮಂತಪ್ಪ ಸೋಮನಾಥ ಈತ ಮಲಗಲದಿನ್ನಿಯಿಂದ ಮುದ್ದೇಬಿಹಾಳಕ್ಕೆ ಹೋಗುವಾಗ ಈ ಅವಘಡ ಸಂಭವಿಸಿದೆ.
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.