ವಿಜಯಪುರ| ರಸ್ತೆಗಿಳಿದ ಎಸ್ಪಿ: ಜಗಳ ನಡೆಸುತ್ತಿದ್ದವರಿಗೆ ಲಾಠಿ ರುಚಿ

ಹೊಸದಿಗಂತ ವರದಿ ವಿಜಯಪುರ:

ಹಣಕಾಸಿನ ವಿಚಾರಕ್ಕಾಗಿ ಜಗಳ ನಡೆಸುತ್ತಿದ್ದವರಿಗೆ ಎಸ್ಪಿ ಸಾಹೇಬರು ಲಾಠಿ ರುಚಿ ತೋರಿಸಿದ ಘಟನೆ ನಗರದ ಬಾಗಲಕೋಟ ಕ್ರಾಸ್ ಬಳಿ ನಡೆದಿದೆ.

ಚಿಕನ್ ಅಂಗಡಿಕಾರರ ಜೊತೆ ಉಂಟಾದ ಜಗಳ ಬೀದಿಗೆ ಬಂದಿದ್ದರಿಂದ ರಸ್ತೆ ಸಂಚಾರಕ್ಕೆ ತೊಂದರೆಯೂ ಆಗಿತ್ತು. ಈ ಸಂದರ್ಭ ಕಾರ್‌ನಲ್ಲಿ ಕಚೇರಿಗೆ ತೆರಳುತ್ತಿದ್ದ ಎಸ್ಪಿ ಎಚ್.ಡಿ. ಆನಂದಕುಮಾರ ಅವರು ಎರಡೂ ಗುಂಪುಗಳಲ್ಲಿದ್ದವರಿಗೆ ಥಳಿಸಿದ್ದಾರೆ. ಬಳಿಕ ಸಂಬಂಧಿಸಿದ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತಂದು, ಗಲಾಟೆ ನಡೆಸಿದವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.

ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!