ಹೊಸದಿಗಂತ ಡಿಜಿಟಲ್ ಡೆಸ್ಕ್:
ನನಗೆ ಇಂದು ಧರ್ಮಸ್ಥಳದಂತಹ ಅಪೂರ್ವ, ಆಧ್ಯಾತ್ಮಿಕ ವಾತಾವರಣದಲ್ಲಿ ಇರಲು ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಶ್ರೀ ಮಂಜುನಾಥ ಸ್ವಾಮಿಯ ಭಕ್ತರು ಸೇರಿದ್ದಾರೆ. ಅವರಲ್ಲಿ ನಾನೂ ಓರ್ವಳು. ಮಹಾದೇವನ ಆಶೀರ್ವಾದ ಪಡೆಯಲು ಅವಕಾಶವಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಕ್ಷಣ ಮಾತನಾಡಿದ ಅವರು, ಡಾ. ಹೆಗ್ಗಡೆಯವರು ತನ್ನ ಸರಳತೆಯಿಂದ ಇದ್ದು, ಬಡಜನರ ಏಳಿಗೆಯ ಸೇವೆ ನಡೆಸುತ್ತಿದ್ದಾರೆ. ಅವರ ಶ್ರೇಷ್ಠ ಜೀವನದ ಕ್ಷಣಗಳನ್ನು ನೋಡಲು, ಅವರೊಂದಿಗೆ ಇದ್ದು ಪ್ರೇರಣೆ ಪಡೆಯಲು ಅವಕಾಶ ಸಿಕ್ಕಿದೆ. ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡುತ್ತಿದ್ದಾರೆ. ಸ್ವ- ಸಹಾಯ ಸಂಘಗಳ ಮೂಲಕ ಮಹಿಳಾ ಆರ್ಥಿಕ ಸಶಕ್ತಿಕರಣ ಆಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಯವಕರು ಅದರಲ್ಲೂ ಆರ್ಥಿಕವಾಗಿ ಹಿಂದುಳಿದವರ ಶಿಕ್ಷಣದ ಉನ್ನತಿಗಾಗಿ ವಿವಿಧ ಯೋಜನೆಗಳ ಮೂಲಕ ಪ್ರೇರಣೆ ನೀಡುತ್ತಿದ್ದಾರೆ ಎಂದರು.