ಸತ್ಯದ ಹಾದಿಯಲ್ಲಿ ನಡೆದರೆ ಶ್ರೀಕೃಷ್ಣ ಮುನ್ನಡೆಸುತ್ತಾರೆ, ಗೆಲುವಿನ ಕ್ರೆಡಿಟ್‌ ದೇವರಿಗೆ ಅರ್ಪಿಸಿದ ಗಂಭೀರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿ ಐಪಿಎಲ್‌ ಸೀಸನ್‌ಗೆ ತೆರೆ ಬಿದ್ದಿದ್ದು, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ಭರ್ಜರಿ ಗೆಲುವು ಸಾಧಿಸಿದೆ. ಈ ಬೆನ್ನಲ್ಲೇ ಕೆಕೆಆರ್‌ ತಂಡದ ಕೋಚ್‌ ಗೌತಮ್‌ ಗಂಭೀರ್‌ ಪಂದ್ಯದ ಗೆಲುವನ್ನು ಶ್ರೀಕೃಷ್ಣನಿಗೆ ಅರ್ಪಿಸಿದ್ದಾರೆ.

ಎಕ್ಸ್ ನಲ್ಲಿ ಗೌತಮ್ ಗಂಭೀರ್‌ ಟ್ವೀಟ್‌ ಮಾಡಿದ್ದು,  ಸತ್ಯದ ಹಾದಿಯಲ್ಲಿ ನಡೆದರೆ ಶ್ರೀಕೃಷ್ಣ ಮುನ್ನಡೆಸುತ್ತಾನೆ ಎಂದು ಹೇಳಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಮೆಂಟರ್ ಆಗಿ ತಂಡಕ್ಕೆ ಮರಳಿರುವುದು ಫ್ರಾಂಚೀಸ್‌ನ ಅದೃಷ್ಟ ಎಂದು ಪ್ರಶಂಸಿಲಾಗಿದೆ. ಟೇಬಲ್ ಟಾಪರ್‌ಗಳಲ್ಲಿ ಅಜೇಯರಾಗಿ ಉಳಿದು, ಅಂತಿಮಾವಾಗಿ ಎಸ್‌ಆರ್‌ಎಚ್ ನ್ನು ಸೋಲಿಸಿ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ನಮ್ಮ ಊಹೆ ನಿಜವಾಗಿದೆ. KKR ಕಪ್ ಎತ್ತಲಿದೆ ಎಂದು ಗೊತ್ತಿತ್ತು. ಬ್ಯಾಟಿಂಗ್ ಅದ್ಭುತ.

LEAVE A REPLY

Please enter your comment!
Please enter your name here

error: Content is protected !!