ಮಲ್ಪೆ ಬೀಚ್ ನಲ್ಲಿ ನೀರು ಪಾಲಾಗುತ್ತಿದ್ದ ಯುವಕರ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ನಾಲ್ವರ ಯುವಕರನ್ನು ಮಲ್ಪೆ ಜೀವರಕ್ಷಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ಸೋಮವಾರ ಸಂಭವಿಸಿದೆ.
ಬಿಜಾಪುರ ಮೂಲದ ಪ್ರವಾಸಿಗರಾದ ಮೋಬಿನ್, ಸೋಫಿಯಾ, ಅಹ್ಮದ್ ಹಾಗು ಮೊಹಮ್ಮದ್ ಜೀವರಕ್ಷಕ ದಳದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಕಡಲಿಗೆ ಇಳಿದಿದ್ದರು, ಕಡಲಿನ ಅಬ್ಬರಕ್ಕೆ ಈಜಲಾಗದೇ ಕೊಚ್ಚಿಕೊಂಡು ಹೋಗುತ್ತಿದ್ದವರನ್ನು ರಕ್ಷಿಸಲಾಗಿದೆ.
ಮಲ್ಪೆ ಜೀವರಕ್ಷಕ ದಳದ ಭರತ್, ಮಧು, ರವಿ, ವಿನೋದ್ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!