ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಮನೆ, ಆಸ್ತಿ ಕಳೆದುಕೊಂಡು ಸಂತ್ರಸ್ತರಾದವರ ಸಾಲಮನ್ನಾ ಮಾಡುವುದಾಗಿ ಕೇರಳ ಬ್ಯಾಂಕ್ ಸೋಮವಾರ(ಆಗಸ್ಟ್ 12) ಘೋಷಿಸಿದೆ.
ಭೀಕರ ಭೂಕುಸಿತದಲ್ಲಿ ಗುಡ್ಡಗಾಡು ಜಿಲ್ಲೆ ವಯನಾಡಿನ ಚೂರಲ್ಮಲದಲ್ಲಿ ಹಲವರು ಮೃತಪಟ್ಟಿದ್ದಾರೆ.
ರಾಜ್ಯದ ಜಿಲ್ಲಾ ಸಹಕಾರಿ ಬ್ಯಾಂಕ್ಗಳ ಏಕೀಕರಣವಾದ ಕೇರಳ ಬ್ಯಾಂಕ್ನ ಚೂರಲ್ಮಲ ಶಾಖೆಯಲ್ಲಿ ಸಾಲ ಪಡೆದು ಈ ದುರಂತದಲ್ಲಿ ಮೃತಪಟ್ಟವರ ಸಾಲವನ್ನು ಮನ್ನಾ ಮಾಡಲು ಹಾಗೂ ಮನೆ, ಆಸ್ತಿ ಕಳೆದುಕೊಂಡಿರುವವರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಬ್ಯಾಂಕ್ ಆಡಳಿತ ಮಂಡಳಿ ತಿಳಿಸಿದೆ.
ಕೇರಳ ಬ್ಯಾಂಕ್ ಈಗಾಗಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿಗಳನ್ನು ನೀಡಿದೆ. ಅಲ್ಲದೆ ಕೇರಳ ಬ್ಯಾಂಕ್ನ ನೌಕರರು ಸ್ವಯಂಪ್ರೇರಿತರಾಗಿ ತಮ್ಮ 5 ದಿನಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಯನಾಡಿನಲ್ಲಿ ಜುಲೈ 30ರಂದು ಸಂಭವಿಸಿದ ಭೀಕರ ಭೂಕುಸಿತ ದುರಂತದಲ್ಲಿ ಈವರೆಗೆ 427 ಶವಗಳು ಪತ್ತೆಯಾಗಿವೆ. ಇನ್ನು ನಾಪತ್ತೆಯಾಗಿರುವ 130 ಜನರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.