ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ. ನಾವು ಯಾರೆಂದು ಮೋದಿಗೆ ಹೇಳಿ ಎಂದು ಉಗ್ರರು ಹೇಳಿದ್ದರು. ಅಂತೆಯೇ ಅಲ್ಲಿಂದ ಬಂದ ಹೆಣ್ಣುಮಕ್ಕಳು ಮೋದಿಗೆ ಹೇಳಿದ್ದಾರೆ.
ಈಗ ನಮ್ಮ ಪ್ರಧಾನಿ ತಕ್ಕ ಪಾಠ ಕಲಿಸಿದ್ದಾರೆ, ಅವರು ಯಾರ ಬಳಿ ಹೋಗಿ ಹೇಳ್ತಾರೆ ಎಂದು ಮಂಜುನಾಥ್ ಸಂಬಂಧಿ ಪ್ರಶ್ನಿಸಿದ್ದಾರೆ.
ಬೆಳಗ್ಗೆ ಏಳುವಾಗಲೇ ಒಳ್ಳೆಯ ಸುದ್ದಿ ಸಿಕ್ಕಿದೆ. `ಆಪರೇಷನ್ ಸಿಂಧೂರ’ ಹೆಸರು ಕೇಳಿಯೇ ರೋಮಾಂಚನ ಆಯ್ತು. ನಾವು ಚಿಕ್ಕವರಿಂದಲೂ ಕಾಶ್ಮೀರ ಭಾರತದ ಸಿಂಧೂರ ಎಂದು ಹೇಳುತ್ತಲೇ ಬಂದಿದ್ದೇವೆ. ಪಹಲ್ಗಾಮ್ ದಾಳಿಯಲ್ಲಿ ಉಗ್ರರು ಭಾರತೀಯ ಮಹಿಳೆಯರ ಸಿಂಧೂರ ಅಳಿಸುವ ಕೆಲಸ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಕೂಡ ಕೆಲಸ ಆರಂಭಿಸಿದೆ ಎಂದು ಡಾ. ರವಿಕಿರಣ್ ಹೇಳಿದ್ದಾರೆ.