ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೇಪರ್ಗೆ ಜಾಹೀರಾತು ಕೊಡೋದಕ್ಕೂ ನಮ್ಮ ಬಳಿ ಹಣ ಇಲ್ಲ, ಹಣ ಇದ್ದರೂ ಬಳಕೆ ಮಾಡೋಕೆ ಬಿಡುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವವೇ ಇಲ್ವಾ ಎಂದು ರಾಗಾ ಪ್ರಶ್ನಿಸಿದ್ದಾರೆ. ನಮ್ಮ ಹಣವನ್ನು ನಾವೇ ಬಳಕೆ ಮಾಡುವಂತಿಲ್ಲ. ಒಂದು ಕುಟುಂಬಕ್ಕೆ ಮಾತ್ರ ಹೀಗಾದ್ರೆ ಏನಾಗತ್ತೆ? ಹಸಿವಿನಿಂದ ಆ ಕುಟುಂಬ ಸಾಯಬೇಕಾಗುತ್ತದೆ ಎಂದಿದ್ದಾರೆ.
ನಮ್ಮ ಖಾತೆಯಿಂದ ಒಂದು ರೂಪಾಯಿ ಹಣ ತೆಗೆಯದಂತೆ ಅಕೌಂಟ್ ಫ್ರೀಝ್ ಮಾಡಿದ್ದಾರೆ. ಚುನಾವಣೆಗೆ ಬಿಜೆಪಿ ಕಾಯ್ತಾ ಇತ್ತು. ನಾವೇನು ಮಾಡಬೇಕು? ಒಂದು ರೈಲ್ವೆ ಟಿಕೆಟ್ ಖರೀದಿಗೂ ನಮ್ಮ ಬಳಿ ದುಡ್ಡಿಲ್ಲ. ಮಾಧ್ಯಮಗಳು ಕೂಡ ಈ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದಿದ್ದಾರೆ.