ನಾಯಕರ ಹಿಂದೆ ಗಿರಿಗಿಟ್ಲೆ ತರ ಸುತ್ತುವವರನ್ನ ನೇಮಿಸಲ್ಲ: ಡಿಕೆ ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲಸ ಮಾಡುವವರಿಗೆ ಪಕ್ಷದಲ್ಲಿ ಹುದ್ದೆ ನೀಡಬೇಕು ಎಂದು ಎಐಸಿಸಿ ಸೂಚನೆ ನೀಡಿದೆ. ಹೀಗಾಗಿ ನಾಯಕರ ಹಿಂದೆ ಸುತ್ತುವರನ್ನ ನೇಮಿಸಿ ಪ್ರಯೋಜನ ಇಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಾಲೂಕು ಮಟ್ಟದಲ್ಲಿ ಹಗಲಿರುಳು ಶ್ರಮಿಸುವವರಿಗೆ ಮಾತ್ರ ಪಕ್ಷ ಜವಾಬ್ದಾರಿ ಕೊಡುತ್ತದೆ. ಪಕ್ಷ ಸಂಘಟನೆ ವಿಚಾರದಲ್ಲಿ ದಿನವಿಡೀ ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುವವರು ಬೇಕು ಎಂದರು.

ಬೇರೆಯವರು ಹೇಳಿದ್ರು ಅಂತ ಯಾರ್ಯಾರನ್ನು ನೇಮಕ ಮಾಡಿಕೊಂಡು ಸಮಯ ವ್ಯರ್ಥ ಮಾಡುವುದರಲ್ಲಿ ಪ್ರಯೋಜನ ಇಲ್ಲ. ಕೆಲಸದಲ್ಲಿ ಆಸಕ್ತಿ ಇಲ್ಲದವರ ಜಾಗಕ್ಕೆ ಒಳ್ಳೆ ಅಭ್ಯರ್ಥಿಗಳನ್ನ ನೇಮಿಸಿ ಪದಾಧಿಕಾರಿಗಳ ಪಟ್ಟಿ ಶೀಘ್ರದಲ್ಲಿ ಅಂತಿಮಗೊಳಿಸಲಾಗುವುದು ಎಂದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!