ಹೊಸದಿಗಂತ ವರದಿ, ಧಾರವಾಡ
ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ತುರುಸಿನಿಂದ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆ ಒಳಗೊಂಡು ಬೆಳಿಗ್ಗೆ 10 ಗಂಟೆ ವೇಳೆಗೆ ಶೇ.14ರಷ್ಟು ಮತದಾನ ನಡೆದಿದೆ.
ಈ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ, ಈ ಬಾರಿ ಶೇ. 90 ರಷ್ಟು ಮತದಾನ ಆಗುವ ನಿರೀಕ್ಷೆ ಇದೆ ಎಂದರು. ಶಿಕ್ಷಕರಿಗೆ ತಾವು ಒಡ್ಡಿದ ಕುರಿತಾಗಿ ಕೇಳಿಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಹೆದರಿಸಲು ನಾನು ದೆವ್ವ ಅಥವಾ ಭೂತವಲ್ಲ. ಯಾರನ್ನಾದರೂ ಹೆದರಿಸಲು, ಹೆದರಲು ಕಾರಣ ಬೇಕಲ್ಲವೇ? ಎಂದು ಪ್ರಶ್ನಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ