ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ: ಧಾರವಾಡದಲ್ಲಿ ತುರುಸಿನ ಮತದಾನ

ಹೊಸದಿಗಂತ ವರದಿ, ಧಾರವಾಡ
ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ತುರುಸಿನಿಂದ‌ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆ ಒಳಗೊಂಡು ಬೆಳಿಗ್ಗೆ 10 ಗಂಟೆ ವೇಳೆಗೆ ಶೇ.14ರಷ್ಟು ಮತದಾನ ನಡೆದಿದೆ.
ಈ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ, ಈ ಬಾರಿ ಶೇ. 90 ರಷ್ಟು ಮತದಾನ ಆಗುವ ನಿರೀಕ್ಷೆ ಇದೆ ಎಂದರು. ಶಿಕ್ಷಕರಿಗೆ ತಾವು ಒಡ್ಡಿದ ಕುರಿತಾಗಿ ಕೇಳಿಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಹೆದರಿಸಲು ನಾನು ದೆವ್ವ ಅಥವಾ  ಭೂತವಲ್ಲ. ಯಾರನ್ನಾದರೂ ಹೆದರಿಸಲು, ಹೆದರಲು ಕಾರಣ ಬೇಕಲ್ಲವೇ? ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!