ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಪ್ರತಿಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಗುರುವಾರ ರಾತ್ರಿ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಲು ಯತ್ನಿಸಿ ವಿಫಲವಾಗಿದೆ. ಭಾರತ ಕೂಡ ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ.
ಭಾರತದ ದಾಳಿಗೆ ಹೆದರಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಬಂಕರ್ನಲ್ಲಿ ಅಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಸಂಸತ್ತನಲ್ಲಿ ಪಾಕಿಸ್ತಾನ ಸಂಸದ ಮಾತನಾಡಿದ್ದು, “ನಮ್ಮ ಪ್ರಧಾನಿ ಭಾರತದ ವಿರುದ್ಧ ಒಂದೇ ಒಂದು ಹೇಳಿಕೆಯನ್ನು ನೀಡಿಲ್ಲ ಅಂತ ಹೇಳಿದ್ದಾರೆ. ಭಾರತದ ಪ್ರಧಾನಿ ಮೋದಿ ಹೆಸರು ಹೇಳಲು ಸಹಿತ ಹೆದರುವ ಹೇಡಿ ಪ್ರಧಾನಿ ಯೋಧರಿಗೆ ಹೇಗೆ ಧೈರ್ಯ ತುಂಬುತ್ತಾನೆ” ಎಂದು ತನ್ನದೇ ದೇಶದ ಪ್ರಧಾನಿ ಬಗ್ಗೆ ಪಾಕ್ ಸಂಸದ ವ್ಯಂಗ್ಯ ಮಾತನಾಡಿದ್ದಾರೆ.