RCB VICTORY | ಟ್ರೋಫಿ ಗೆದ್ದು ಸ್ಮೃತಿ ಮಂಧಾನ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಅಮೋಘ ಗೆಲುವು ಸಾಧಿಸಿದೆ.

ಪಂದ್ಯ ಮುಗಿದ ಬಳಿಕ ನಾಯಕಿ ಸ್ಮೃತಿ ಮಂಧಾನ ಅಭಿಮಾನಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ನಾನಿನ್ನೂ ಸ್ಪೆಶಲ್ ಫೀಲಿಂಗ್‌ನಿಂದ ಹೊರಬಂದಿಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಾಗ ಪಂದ್ಯ ನಮ್ಮ ಪರ ಆಗೋದನ್ನು ಯಾರೂ ತಪ್ಪಿಸುವಂತಿಲ್ಲ.

ಇಡೀ ನಮ್ಮ ಸ್ಟ್ರಾಂಗ್ ಟೀಂ ಟ್ರೋಫಿ ಗೆದ್ದಿದೆ. ಈ ಸಲ ಕಪ್ ನಮ್ದೇ ಎಂದು ಕೂಗಿ ಕೂಗಿ ನಮ್ಮನ್ನು ಚಿಯರ್ ಮಾಡಿದ ಅಭಿಮಾನಿಗಳಿಗೆ ಚಿರಋಣಿ ಆಗಿದ್ದೇನೆ. ‘ಈ ಸಲ ಕಪ್ ನಮ್ದೇ ಅಲ್ಲ, ಈ ಸಲ ಕಪ್ ನಮ್ದು’ ಎಂದು ಸ್ಮೃತಿ ಸ್ಪಷ್ಟವಾಗಿ ಕನ್ನಡದಲ್ಲಿಯೇ ಹೇಳಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!