ಲೋಕಸಭಾ ಚುನಾವಣೆಯ 7 ಹಂತಗಳು ಮುಕ್ತಾಯಗೊಂಡಿದ್ದು, ಇಂದು ಮತ ಎಣಿಕೆ ಕಾರ್ಯ ಶುರುವಾಗಿದ್ದು, ಫಲಿತಾಂಶ ಹೊರಬೀಳಲಿದೆ, ಹಾವೇರಿ,ಚಿತ್ರದುರ್ಗ ಹಾಗೂ ಕಲಬುರಗಿಯಲ್ಲಿ ಈವರೆಗಿನ ಕೌಂಟಿಂಗ್ ವಿವರ ಹೀಗಿದೆ..
ಹಾವೇರಿ:
ಬಸವರಾಜ ಬೊಮ್ಮಾಯಿ (ಬಿಜೆಪಿ): 3,61,796
ಆನಂದಸ್ವಾಮಿ ಗಡ್ಡದೇವರಮಠ
(ಕಾಂಗ್ರೆಸ್): 3,32,059
ಬಿಜೆಪಿ ಅಭ್ಯರ್ಥಿಗೆ 29,737 ಮತಗಳ ಮುನ್ನಡೆ.
ಚಿತ್ರದುರ್ಗ:
ಹದಿನಾರನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 5,58,127 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ 5,24,936 ಮತಗಳನ್ನು ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 33,191 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕಲಬುರಗಿ:
ಗುಲಬರ್ಗಾ ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆ ಅರ್ಧದಷ್ಟು ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಸದ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ 18 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.
7,45,676 ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 13 ಲಕ್ಷ 6 ಸಾವಿರ ಮತಗಳು ಚಲಾವಣೆ ಆಗಿದ್ದವು. ಸದ್ಯ 7.45 ಲಕ್ಷ ಮತಗಳ ಎಣಿಕೆ ಪೂರ್ಣವಾಗಿದೆ.
ಇನ್ನೂ ಕೂತುಹುಲ ಮೂಡಿಸಿರುವ ಮತ ಎಣಿಕೆ ಕಾರ್ಯ. ಆದರೆ, ಗೆಲುವಿನ ಗುಟ್ಟನ್ನು ಇನ್ನೂ ಸಹ ಮತದಾರ ಬಿಟ್ಟು ಕೊಡುತ್ತಿಲ್ಲ.