ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದ ಜಾಗಕ್ಕೆ ಬಿಜೆಪಿ ನಿಯೋಗ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ವೇಳೆ ನಿವಾಸಿಗಳ ದಾಖಲಾತಿ ಪರಿಶೀಲನೆ ಮಾಡಿದರು.. ನಿವಾಸಿಗಳು ಜೊತೆ ಮಾತಾಡಿ ಮಾಹಿತಿ ಕಲೆ ಹಾಕಿದರು.
ಬೆಂಗಳೂರಿನ ಕೋಗಿಲು ಲೇಔಟ್ನಲ್ಲಿ ಅನಧಿಕೃತ ಶೆಡ್, ಮನೆಗಳಲ್ಲಿದ್ದವರ ಪೌರತ್ವ ಮತ್ತು ಮೂಲದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್ಐಎ) ತನಿಖೆ ನಡೆಸಬೇಕೆಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯನೇತೃತ್ವದ ಟೋಪಿ ಸರ್ಕಾರ. ಕನ್ನಡಿಗರಿಗೆ ಟೋಪಿ ಹಾಕಿ ಮಿನಿ ಬಾಂಗ್ಲಾದೇಶ ಮಾಡಿದೆ. ಕರ್ನಾಟಕ ಮಿನಿ ಬಾಂಗ್ಲಾದೇಶ ಹಬ್ ಆಗಿದೆ. ಬೇರೆ ಬೇರೆ ರಾಜ್ಯದಿಂದ ಜನರು ಇಲ್ಲಿಗೆ ಬಂದಿದ್ದಾರೆ. 25 ವರ್ಷಗಳಿಂದ ಇದ್ದೀವಿ ಅಂತಾರೆ. ಇದು ಸಾಧ್ಯನಾ? ನಾವು ಇವತ್ತು ಬರುತ್ತೇವೆ ಅಂತ ಇಲ್ಲಿ ಇದ್ದವರನ್ನ ಹೊರಗೆ ಕಳಿಸಿದ್ದಾರೆ. ಟ್ಯಾನಿ ರೋಡ್ ಆ ಕಡೆ ಈ ಕಡೆಯಿಂದ ಕರೆದುಕೊಂಡು ಬಂದು ನಿಲ್ಲಿಸಿದ್ದಾರೆ ಅಂತ ಆರೋಪ ಮಾಡಿದರು.
ಇವರು ಯಾವಾಗ ಬಂದರು? ಎಲ್ಲಿಂದ ಬಂದರು ಅಂತ ಮಾಹಿತಿ ಇದೆ. ಒಂದು ವರ್ಷದ ಹಿಂದೆ ಯಾರು ಇರಲಿಲ್ಲ. ಈಗ ಇಲ್ಲಿ ಮನೆಗಳು ಇವೆ. ಡಿಕೆ ಶಿವಕುಮಾರ್ ಅವರು ಅಕ್ರಮ ಮನೆ ಒಡೆದು ಹಾಕ್ತೀವಿ ಅಂದರು. ಕರ್ನಾಟಕದಲ್ಲಿನ ಕನ್ನಡದ ಜನರಿಗೆ ಇವರು ಕರೆಂಟ್ ಕೊಡೋಕೆ ಆಗಿಲ್ಲ. ಇವರಿಗೆ ಕರೆಂಟ್ ಕೊಟ್ಟಿದ್ದಾರೆ. ಇವೆರೇನು ಸಿದ್ದರಾಮಯ್ಯ ಮನೆಯವರ. ಇದನ್ನ ಮಿನಿ ಬಾಂಗ್ಲಾದೇಶ ಮಾಡಿದ್ದಾರೆ. ಡ್ರಗ್ಸ್ ರಾಜ್ಯ ಆಗ್ತಿದೆ ಕರ್ನಾಟಕ. ಪೊಲೀಸರು ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ದಿನಾ ಒದೊಂದು ಕಾಲೋನಿಯಲ್ಲಿ ಬಾಂಗ್ಲಾದೇಶ ಹುಟ್ಟುತ್ತಿದೆ ಅಂತ ಟೀಕಿಸಿದರು.
ಇಲ್ಲಿ ಡೆಮಾಲೀಷನ್ ಮಾಡೋದು ಪಾಕಿಸ್ತಾನಕ್ಕೆ ಹೇಗೆ ಹೋಯ್ತು? ಇಲ್ಲಿ ಭಯೋತ್ಪಾದಕರು ಇದ್ದಾರೆ. ಅವರು ಪಾಕಿಸ್ತಾನಕ್ಕೆ ಮಾಹಿತಿ ಕೊಡ್ತಾ ಇದ್ದಾರೆ. ಕೇರಳ ಸಂಸದ ಒಬ್ಬ ಇಲ್ಲಿಗೆ ಬಂದಿದ್ದ ಅವನನ್ನ ಬಂಧನ ಮಾಡಬೇಕಿತ್ತು. ಕೇರಳದಲ್ಲಿ ಇವತ್ತು ಸಿಎಂ ವೇದಿಕೆ ಹಂಚಿಕೆ ಕೊಂಡಿದ್ದಾರೆ. ಸಿಎಂಗೆ ನಾಚಿಕೆ ಆಗಬೇಕು. ಇಲ್ಲಿನ ಜನರಿಗೆ ವಿದ್ಯುತ್ ಇಲಾಖೆ ಅವರು ಕರೆಂಟ್ ಕೊಟ್ಟಿದ್ದಾರೆ. ನಾಚಿಕೆ ಆಗೊಲ್ಲವಾ? ಬೆಸ್ಕಾಂ ಅವರು ಮೀಟರ್ ಹಾಕಿದ್ದೀರಾ? ನಾಚಿಕೆ ಆಗಬೇಕು ಅಂತ ಕಿಡಿಕಾರಿದರು.
ಕೋಗಿಲು ಲೇಔಟ್ ನಲ್ಲಿ ಒಂದು ವರ್ಷದ ಒಳಗೆ ತಲೆ ಎತಿದ್ದ ಅಕ್ರಮ ಮನೆಗಳನ್ನ ಸರ್ಕಾರ ಡೆಮಾಲಿಷನ್ ಮಾಡ್ತು. ಹಾಗಾದ್ರೆ ಸರ್ಕಾರ ಸರಿ ಮಾಡ್ತಾ? ತಪ್ಪು ಮಾಡ್ತಾ? ಡಿಕೆ ಶಿವಕುಮಾರ್ ಅಕ್ರಮ ಮನೆ ಅಂತ ಹೇಳಿದ್ರು. ವೇಣುಗೋಪಾಲ್ ಟ್ವೀಟ್, ಪಾಕಿಸ್ತಾನ ಟ್ವೀಟ್, ಕೇರಳ ಸಿಎಂ ಅವರ ಪ್ರತಿನಿಧಿ ಕಳಿಸಿದಾಗ ಇವರು ವರಸೆ ಬದಲಾವಣೆ ಮಾಡಿದ್ದಾರೆ. ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ದಾಖಲಾತಿ ಪರಿಶೀಲನೆಗೆ NIA ಗೆ ವಹಿಸಿಬೇಕು. ಕರ್ನಾಟಕದಲ್ಲಿ 38 ಲಕ್ಷ ಜನ ಮನೆಗಾಗಿ ಕಾಯ್ತಾ ಇದ್ದಾರೆ. ಅವರಿಗೆ ಕೊಡದೇ ಇವರಿಗೆ ಯಾಕೆ ಕೊಡ್ತೀರಾ? ದಾಖಲಾತಿ ಪರಿಶೀಲನೆ ಆಗದೇ ಮನೆ ಕೊಡಬಾರದು. ಒಂದು ವೇಳೆ ಬೇರೆ ಅವರಿಗೆ ಕೊಡೋ ಮನೆ ಇವರಿಗೆ ಕೊಟ್ಟರೆ ಮನೆಗಾಗಿ ಕಾಯ್ತಿರೋರನ್ನ ನಾವೇ ಆ ಮನೆಗಳಿಗೆ ನುಗ್ಗಿಸುತ್ತೇವೆ ಅಂತ ಎಚ್ಚರಿಕೆ ಕೊಟ್ಟರು.

