ಆದೇಶ ಧಿಕ್ಕರಿಸಿ ತಮಿಳುನಾಡಿಗೆ ನೀರು ಬಿಡದಿದ್ರೆ ಏನಾಗುತ್ತದೆ? ಸಿಎಂ ಹೇಳಿದ್ದು ಹೀಗೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿಗೆ ನೀರನ್ನು ಬಿಟ್ಟರೆ ನಮ್ಮ ರಾಜ್ಯಕ್ಕೆ ಏನೂ ಉಳಿಯುವುದಿಲ್ಲ. ರೈತರು ಬೆಳೆಯನ್ನೇ ನಂಬಿ ಜೀವನ ಕಟ್ಟಿದ್ದಾರೆ ಅವರ ಕಷ್ಟ ನಮಗೆ ಅರ್ಥವಾಗುತ್ತದೆ, ಆದರೆ ಸುಪ್ರೀಂ ತೀರ್ಪನ್ನು ಒಪ್ಪದೇ ಹೋದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರೈತರ ಅಭಿಪ್ರಾಯವನ್ನು ಒಪ್ಪುತ್ತೇವೆ, ಆದರೆ ನ್ಯಾಯಾಂಗ ನಿಂದನೆ ಮಾಡಿದರೆ ಸರ್ಕಾರವನ್ನೇ ವಜಾಗೊಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ನಾವು ತಮಿಳುನಾಡಿಗೆ ನೀರು ಬಿಡದೇ ಹೋದರೆ ಕೇಂದ್ರವು ನಿಯಂತ್ರಣ ಸಾಧಿಸಿ ನೀರು ಬಿಡುತ್ತದೆ ಎಂದಿದ್ದಾರೆ.

ಚೆನ್ನಾಗಿ ಮಳೆ ಬಂದಿದ್ದರೆ ಯಾವ ಸಮಸ್ಯೆಯೂ ಆಗುತ್ತಿರಲಿಲ್ಲ. ಈ ತಿಂಗಳೂ ಮಳೆಯಿಲ್ಲ, ಈ ಬಗ್ಗೆ ಕಾವೇರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದೆ. ನಮಗೆ ನೀರಾವರಿಗೆ 70 ಟಿಸಿಎಂ ಹಾಗೂ ಕುಡಿಯಲು 30 ಟಿಸಿಎಂ ನೀರು ಬೇಕು, ಇನ್ನು ಕೈಗಾರಿಕೆಗಳಿಗೆ 3 ಟಿಸಿಎಂ ನೀರು ಬೇಕು. ಒಟ್ಟಾರೆ 106 ಟಿಸಿಎಂ ನೀರಿನ ಅಗತ್ಯ ನಮಗೆ ಇದೆ. ಆದರೆ ನಮ್ಮ ಬಳಿ ಈಗ ಇರುವುದು 50 ಟಿಸಿಎಂ ಅಡಿ ನೀರು ಮಾತ್ರ. ಇದರಲ್ಲಿ ಜನರಿಗೆ ಕುಡಿಯಲು ನೀಡುವ ನೀರಿನ ಅಗತ್ಯವನ್ನು ಪೂರೈಸಲೇಬೇಕು. ತದನಂತರ ಉಳಿಯುವುದೇ 20 ಟಿಸಿಎಂ ಮಾತ್ರ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!