ಎಲ್ಲೆಲ್ಲಿ ಮಹಾದೇವನಿದ್ದಾನೋ ಅಲ್ಲೆಲ್ಲಾ ಸುಭೀಕ್ಷೆ, ಕಾಶಿ ಇನ್ನಷ್ಟು ಸುಂದರ : ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಶಿಯ ಸ್ವರೂಪ ಮತ್ತಷ್ಟು ಸುಂದರವಾಗಿದೆ. ಎಲ್ಲೆಲ್ಲಿ ಮಹಾದೇವನಿದ್ದಾನೋ ಅಲ್ಲೆಲ್ಲ ಭೂಮಿ ಸುಭೀಕ್ಷವಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಾರಣಾಸಿಯ ಬಿಎಚ್‌ಯುನಲ್ಲಿ ನಡೆದ ಸಂಸದ್ ಸಂಸ್ಕೃತ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ್ದಾರೆ.

ಕಾಶಿಯ ಸ್ವರೂಪ ಮತ್ತಷ್ಟು ಬದಲಾಗಿದೆ, ಈಗ ಸುಂದರವಾದ ಕಾಶಿಯನ್ನು ಕಂಡು ಮಹಾದೇವನಿಗೂ ಸಂತಸವಾಗಿದೆ. ಕಾಶಿ ಜ್ಞಾನದ ರಾಜಧಾನಿ, ಇಂದು ಕಾಶಿಯ ಸ್ವರೂಪ ಬದಲಾಗುತ್ತಿದೆ, ಇದನ್ನೆಲ್ಲ ಮಹಾದೇವನೇ ಮಾಡಿಸುತ್ತಿದ್ದಾನೆ. ಎಲ್ಲೆಲ್ಲಿ ಆತನ ಆಶೀರ್ವಾದವಿದೆಯೋ ಅಲ್ಲಿ ಎಲ್ಲವೂ ಕ್ಷೇಮ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!