ಯಾರಾಗ್ತಾರೆ ಸಿಎಂ?: ಶಾಂಗ್ರಿಲಾ ಹೋಟೆಲ್ ನಲ್ಲಿ ಡಿಕೆಶಿ-ಸಿದ್ದರಾಮಯ್ಯ ಬೆಂಬಲಿಗರ ಹೈಡ್ರಾಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರಿನ ಶಾಂತಿನಗರದಲ್ಲಿರುವ ಶಾಂಗ್ರಿ – ಲಾ ಹೋಟೆಲ್ ನಲ್ಲಿ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಯುತ್ತಿದ್ದು, ಹೊರಗಡೆ ಡಿಕೆಶಿ-ಸಿದ್ದರಾಮಯ್ಯ ಬೆಂಬಲಿಗರು ಗಲಾಟೆ ನಡೆಸುತ್ತಿದ್ದು, ಇಬ್ಬರ ಬೆಂಬಲಿಗರು ತಮ್ಮ ತಮ್ಮ ನಾಯಕರುಗಳು ಸಿಎಂ ಆಗಬೇಕು ಅಂತ ಹೈಡ್ರಮಾ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದರಾಮಯ್ಯ ಫೋಟೋ ಹಿಡಿದುಕೊಂಡು ಸಿದ್ದು ಸಿಎಂ ಎಂದರೆ, ಇತ್ತ ಡಿಕೆಶಿ ಬೆಂಬಲಿಗರು ಅವರ ಫೋಟೋ ಹಿಡಿದುಕೊಂಡು ಡಿಕೆಶಿ ಸಿಎಂ ಅಂತ ಕೂಗುತ್ತಿದ್ದಾರೆ.

ಇದೀಗ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ ಮೂವರು ನಾಯಕರನ್ನು ಕಳುಹಿಸಿಕೊಟ್ಟಿದ್ದು, ಇವರು ಸಭೆಯ ನಿರ್ಧಾರವನ್ನು ಹೈಕಮಾಂಡ್‌ಗೆ ನೀಡಲಿದ್ದು, ಬಳಿಕ ಹೈಕಮಾಂಡ್‌ ಸಿಎಂ ಹೆಸರನ್ನು ಪ್ರಕಟ ಮಾಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!