KNOW WHY? | ದಾಳಿಂಬೆ ಬಿಡಿಸಿದ ನಂತರ ಕೈಗಳಲ್ಲಿ ಕರೆ ಹಾಗೇ ಉಳಿಯೋದ್ಯಾಕೆ?

ದಾಳಿಂಬೆ ಹಣ್ಣು ಬಿಡಿಸಿದ ನಂತರ ಕೈಗಳು,‌ ಉಗುರುಗಳು ಕಪ್ಪಾಗುತ್ತವೆ, ಎಷ್ಟು ಬಾರಿ‌ ನೀರಿನಲ್ಲಿ ಕೈತೊಳೆದರೂ ಸೋಪ್ ಹಾಕಿ ತೊಳೆದರೂ ಈ ಕಲೆ ಹೋಗೋದಿಲ್ಲ. ಈ ರೀತಿ ಕಪ್ಪು ‌ಕಲೆ ಬರೋದ್ಯಾಕೆ? ಇದನ್ನು‌ ಹೋಗಿಸೋದು ಹೇಗೆ..

ದಾಳಿಂಬೆಯಲ್ಲಿ ಹೇರಳವಾದ ಕಬ್ಬಿಣಾಂಶ ಇದೆ.‌ ಇದರಿಂದ ದಾಳಿಂಬೆ ರಸ ಉಗುರುಗಳಿಗೆ ತಾಗಿ, ಆಕ್ಸಿಜನ್ ಜೊತೆ ಬೆರೆತು ಉಗುರಿನ‌ ಸುತ್ತ ಕಪ್ಪು ಬಣ್ಣ ತರುತ್ತವೆ. ಇದನ್ನು ಹೋಗಿಸೋದು ಸ್ವಲ್ಪ‌ ಕಷ್ಟವೇ.

ಹೋಗಿಸೋದು ಹೇಗೆ?
ಸೋಪ್ ಹಾಕಿ ತಿಕ್ಕಿದರೂ ಒಂದೆರಡು ದಿನ‌ ಇದರ ಕಲೆ‌ ಇರುತ್ತದೆ. ಕೈಗಳ ಮೇಲೆ ನಿಂಬೆರಸ ಬೀಳಿಸಿ, ನಂತರ ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ನಂತರ ಸೋಪ್ ಹಾಕಿ ಚೆನ್ನಾಗಿ ತಿಕ್ಕಿದರೆ ಕಲೆ ಹೋಗುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!