ಬೆಳಗ್ಗೆ ದೇವರ ಪೂಜೆಗೆ, ಮುಡಿಯೋದಕ್ಕೆ ಎಂದು ಕೂವುಗಳನ್ನು ಎಲೆಗಳನ್ನು ಕೀಳುವ ಜನ ರಾತ್ರಿಯಾದಂತೆ ಗಿಡಗಳ ಬಳಿ ಹೋಗೋದೂ ಇಲ್ಲ. ಇದಕ್ಕೆ ಕಾರಣ ಏನು?
ಹಿಂದೆಲ್ಲಾ ಹುಳ, ಹುಪ್ಪಡೆ, ಹಾವುಗಳ ಸಂಖ್ಯೆ ಹೆಚ್ಚಿರುತ್ತಿತ್ತು. ರಾತ್ರಿ ವೇಳೆ ಕೀಳಲು ಹೋದಾಗ ಕಾಣಿಸದೆ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು, ಅದಕ್ಕಾಗಿ ಎಲೆ ಹೂವುಗಳನ್ನು ಕೀಳುತ್ತಿರಲಿಲ್ಲ.
ಇನ್ನೊಂದು ಕಾರಣ ಎಂದರೆ ಗಿಡಗಳು ರಾತ್ರಿ ನಮ್ಮಂತೆಯೇ ನಿದ್ದೆ ಮಾಡುತ್ತವೆ. ಸೂರ್ಯನ ಕಿರಣಗಳಿಲ್ಲದ ಕಾರಣ ಯಾವ ಕೆಲಸವೂ ನಡೆಯುವುದಿಲ್ಲ. ಮರುದಿನ ನಡೆಯುವ ಕೆಲಸಗಳಿಗೆ ತಮ್ಮ ದೇಹವನ್ನು ತಯಾರು ಮಾಡಿಕೊಳ್ಳುತ್ತಿರುತ್ತವೆ. ಮಲಗಿದವರನ್ನು ಡಿಸ್ಟರ್ಬ್ ಮಾಡಿದರೆ ಗಿಡದ ಬೆಳವಣಿಗೆಗೆ ತೊಂದರೆಯಾಗುತ್ತದೆ.