‘ಕರೆನ್ಸಿ ನೋಟುಗಳಲ್ಲಿ ಅಂಬೇಡ್ಕರ್ ಫೋಟೋ ಏಕೆ ಹಾಕಬಾರದು’: ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇದೀಗ ಕರೆನ್ಸಿ ನೋಟುಗಳ ಮೇಲೆ ಬೇರೆ ಬೇರೆ ಗಣ್ಯರ ಭಾವಚಿತ್ರ ಮುದ್ರಿಸುವ ಕುರಿತು ಚರ್ಚೆಗಳು ಎದ್ದಿವೆ. ನಿನ್ನೆಯಷ್ಟೇ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರು ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮಿ ಹಾಗೂ ಗಣೇಶರ ಭಾವಚಿತ್ರಗಳನ್ನು ಮುದ್ರಿಸಬಾರದೇಕೆ ಎಂದಿದ್ದರು. ಇದೀಗ ಅವರ ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ ” ನೋಟುಗಳ ಮೇಲೆ ಅಂಬೇಡ್ಕರ್ ಫೋಟೋ ಏಕೆ ಹಾಕಬಾರದು” ಎಂದು ಹೇಳಿದ್ದಾರೆ.

ಈ ಹಿಂದೆ ಕಲ್ಕತ್ತಾದ ಹಿಂದೂ ಮಹಾಸಭಾವು ಗಾಂಧೀಜಿ ಪೋಟೋ ಬದಲಾಗಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಚಿತ್ರವನ್ನು ಮುದ್ರಿಸಬೇಕು ಎಂದು ಹೇಳಿತ್ತು. ಇದೀಗ ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ ʼಕರೆನ್ಸಿ ನೋಟುಗಳ ಮೇಲೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಫೋಟೋ ಏಕೆ ಹಾಕಬಾರದು?ʼ ಎಂದು ಪ್ರಶ್ನಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!