ಹೊಸದಿಗಂತ ವರದಿ, ವಿಜಯಪುರ
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮಂಗಳೂರು ಬ್ಲಾಸ್ಟ್ ಪ್ರಕರಣದ ಬಗ್ಗೆ ಯಾಕೆ ಮಾತಾಡುತ್ತಿಲ್ಲ, ಮುಸ್ಲಿಂರನ್ನು ಸಿಎಂ ಮಾಡುವೆ ಎನ್ನುವ ಕುಮಾರಸ್ವಾಮಿ ಯಾಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್, ಜೆಡಿಎಸ್ ಉದ್ದೇಶ ಮುಸ್ಲಿಂ ತುಷ್ಟಿಕರಣ. ಮುಸ್ಲಿಂರನ್ನು ಖುಷಿ ಪಡಿಸೋದೆ ಇವರ ಜೀವನ ಎಂದು ವ್ಯಂಗ್ಯವಾಡಿದರು.
ಇನ್ನು ವಂದೇ ಮಾತರಂ ಬೇಡ ಎಂದ ಸಿದ್ದರಾಮಯ್ಯ ವಿರುದ್ಧ ಗರಂ ಆದ ಯತ್ನಾಳ ರಾಷ್ಟ್ರ ಗೀತೆಯು ಸಿದ್ದರಾಮಯ್ಯಗೆ ಅಲರ್ಜಿ. ಕಾಂಗ್ರೆಸ್ ಮುಸ್ಲಿಂರಿಗೆ ಮಾರಾಟವಾಗಿದೆ ಎಂದು ಆರೋಪಿಸಿದರು.
ಗಡಿ ವಿವಾದ ಹಿನ್ನೆಲೆ ಅಲ್ಲಿನವರೇ ನಮ್ಮ ಕರ್ನಾಟಕಕ್ಕೆ ಸೇರುತ್ತೇನೆ ಎಂದಿದ್ದಾರೆ. ನಾವೇನು ಅವರಿಗೆ ಫೋರ್ಸ್ ಮಾಡಿಲ್ಲ. ನಾವೇನು ಅಲ್ಲಿ ಹೋರಾಟ ಮಾಡಿಸುವಂತಹ, ಇನ್ನಿತರ ಪ್ರಚೋದನೆ ಕೊಟ್ಟಿಲ್ಲ. ಅಲ್ಲಿನ ಜತ್ತ ತಾಲೂಕಿನ ಜನರಿಗೆ ಅನ್ಯಾಯ ಆಗುತ್ತಿದೆ. ಆ ಅನ್ಯಾಯಕ್ಕೆ ಸಿಡಿದೆದ್ದು ಅವರು ಕರ್ನಾಟಕಕ್ಕೆ ಸೇರಬೇಕು ಅಂತಿದ್ದಾರೆ ಎಂದರು.
ಇನ್ನು ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಮಹಾಜನ ವರದಿ ನೀಡಲಾಗಿದೆ. ಅದನ್ನ ಎಲ್ಲರು ಒಪ್ಪಿಕೊಳ್ಳಬೇಕು. ಅವರೇ ಆಯೋಗ ರಚಿಸಿ, ಈಗ ಅವರೇ ಅದಕ್ಕೆ ಒಪ್ಪೊದಿಲ್ಲ ಅಂದರೆ ಅದಕ್ಕೆ ಅಪಮಾನ ಮಾಡಿದ ಹಾಗೆ ಎಂದರು.