ಹೊಸದಿಗಂತ ಡಿಜಿಟಲ್ ಡೆಸ್ಕ್:
ನೈಋತ್ಯ ಮಾನ್ಸೂನ್ ಪ್ರಭಾವದಿಂದ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ನದಿ, ತೊರೆ, ಹಳ್ಳ-ಕೊಳ್ಳ ತುಂಬಿ ಹರಿಯುತ್ತಿರುವುದರಿಂದ ಚಾಲಕುಡಿ ನದಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿದೆ. ಈ ನದಿ ನೀರಿನ ಪ್ರವಾಹದಲ್ಲಿ ಒಂಟಿ ಸಲಗವೊಂದು ಸಿಲುಕಿರುವ ವಿಡಿಯೋ ವೈರಲ್ ಆಗಿದೆ.
ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ನದಿಯ ಮಧ್ಯದಲ್ಲಿ ಸಿಲುಕಿದ್ದ ಆನೆಯನ್ನು ರಕ್ಷಿಸಲು ಯತ್ನಿಸಿದರಾದರೂ ಅದು ಸಫಲವಾಗಲಿಲ್ಲ. ಪ್ರವಾಹದ ನೀರಿಗೆ ಆನೆ ಕೊಚ್ಚಿ ಹೋಗಿದೆ. ನದಿ ಮಧ್ಯಭಾಗದಲ್ಲಿ ಮುರಿದು ಬಿದ್ದದ್ದ ಮರದ ತುಂಡಿನ ಸಹಾಯದಿಂದ ದಡ ತಲುಪಿದ ಆನೆ ನಂತರ ಕಣ್ಮರೆಯಾಗಿದೆ.
ಅರಣ್ಯಾಧಿಕಾರಿಗಳ ಪ್ರಕಾರ ಆನೆ ಕಾಡಿನೊಳಗೆ ಹೋಗಿದೆ ಎನ್ನುತ್ತಿದ್ದಾರೆ. ಆಹಾರಕ್ಕಾಗಿ ಸಮೀಪದ ಗ್ರಾಮಕ್ಕೆ ತೆರಳಿ ಅರಣ್ಯ ಪ್ರದೇಶಕ್ಕೆ ವಾಪಸಾಗುತ್ತಿದ್ದಾಗ ಆನೆ ನದಿಯಲ್ಲಿ ಸಿಲುಕಿಕೊಂಡಿದೆ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Watch the valiant attempts of a tusker, who was stranded in the middle of Chalakudy river in Thrissur. The elephant managed to get to the safety of the forest on the other side after several hours. #KeralaRains pic.twitter.com/FYC1w6FJ2e
— azeefa (@AzeefaFathima) August 2, 2022