ಹೊಸದಿಗಂತ ವರದಿ ದಾಂಡೇಲಿ :
ತಾಲೂಕಿನ ಅಂಬೇವಾಡಿ – ಬರ್ಚಿ ರಸ್ತೆಯಲ್ಲಿ ಕಾಡಾನೆಯೆಂದು ಪ್ರತ್ಯಕ್ಷವಾದ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ.
ಮಿತ್ರ ರಾಹುಲ್ ಎಂಬುವರು ಗಣೇಶಗುಡಿಯಿಂದ ದಾಂಡೇಲಿಗೆ ಬರುತ್ತಿರುವ ಸಂದರ್ಭದಲ್ಲಿ ಬರ್ಚಿ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಯಾವುದೇ ಭಯವಿಲ್ಲದೆ ಆಹಾರವನ್ನರಸಿ ಆನೆ ರಸ್ತೆ ಬದಿಗೆ ಬಂದಿದೆ ಎಂದು ತಿಳಿದು ಬಂದಿದೆ.



