ಹೊಸದಿಗಂತ ವರದಿ ಮಡಿಕೇರಿ:
ದಕ್ಷಿಣ ಕೊಡಗಿನ ಮತ್ತೂರು ಗ್ರಾಮದಲ್ಲಿ ಆರು ಆನೆಗಳಿರುವ ಕಾಡಾನೆಗಳ ಹಿಂಡೊಂದು ಬೀಡುಬಿಟ್ಟಿದ್ದು, ಭಾರೀ ಪ್ರಮಾಣ ಬೆಳೆಯನ್ನು ನಾಶಪಡಿಸಿವೆ.
ಪೊನ್ನಂಪೇಟೆ ಸಮೀಪದ ಮತ್ತೂರಿನಲ್ಲಿ ಬೀಡುಬಿಟ್ಟಿರುವ ಆರು ಆನೆಗಳ ಹಿಂಡು ಮಧ್ಯಾಹ್ನ ಗಿರೀಶ್ ಎಂಬುವವರ ಕಾಫಿ ತೋಟಕ್ಕೆ ನುಗ್ಗಿ ಕಾಫಿ ಗಿಡಗಳನ್ನು ಧ್ವಂಸ ಮಾಡುವುದರೊಂದಿಗೆ ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶಪಡಿಸಿವೆ.
ಈ ಆನೆಗಳ ಹಿಂಡು ಕಳೆದ ಒಂದು ವಾರದಿಂದ ಅರುವತ್ತೊಕ್ಲು, ಜೋಡುಬೀಟಿ, ಕಿರುಗೂರು, ಮತ್ತೂರು ಗ್ರಾಮಗಳ ಸುತ್ತ ಮುತ್ತ ಓಡಾಡುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.