ಜೋರಾದ ಗಾಳಿಗೆ ಮೇಲ್ಛಾವಣಿ ಶೆಡ್ ಹಾರಿ ಮೈಮೇಲೆ ಬಿದ್ದು ಮಹಿಳೆ ಸಾವು

ಹೊಸದಿಗಂತ ವರದಿ ವಿಜಯಪುರ:

ಜೋರಾದ ಗಾಳಿಗೆ ಪತ್ರಾಸ ಮನೆಯ ಮೇಲ್ಛಾವಣಿ ಶೆಡ್ (ತಗಡು) ಹಾರಿ, ಮಹಿಳೆಯ ಮೇಲೆ ಬಿದ್ದ ಪರಿಣಾಮ ಮಹಿಳೆ ಸಾವಿಗೀಡಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ನಡೆದಿದೆ.

ಕೊಪ್ಪ ತಾಂಡಾ ನಿವಾಸಿ ಸುನೀತಾ ಕಾಂತು ರಾಠೋಡ (35) ಮೃತಪಟ್ಟ ದುರ್ದೈವಿ.

ಸುನೀತಾ ರಾಠೋಡ ಮನೆಯ ಹೊರಗೆ ಇದ್ದ ವೇಳೆ ಜೋರಾದ ಗಾಳಿ ಬೀಸಿದ್ದು, ಮೇಲ್ಛಾವಣಿ ತಗಡು ಹಾರಿ ಬಿದ್ದು, ತೀವ್ರವಾಗಿ ಪೆಟ್ಟಾಗಿ ಅಸುನೀಗಿದ್ದಾರೆ.

ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!