ಹೊಸದಿಗಂತ ವರದಿ ವಿಜಯಪುರ:
ಜೋರಾದ ಗಾಳಿಗೆ ಪತ್ರಾಸ ಮನೆಯ ಮೇಲ್ಛಾವಣಿ ಶೆಡ್ (ತಗಡು) ಹಾರಿ, ಮಹಿಳೆಯ ಮೇಲೆ ಬಿದ್ದ ಪರಿಣಾಮ ಮಹಿಳೆ ಸಾವಿಗೀಡಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ನಡೆದಿದೆ.
ಕೊಪ್ಪ ತಾಂಡಾ ನಿವಾಸಿ ಸುನೀತಾ ಕಾಂತು ರಾಠೋಡ (35) ಮೃತಪಟ್ಟ ದುರ್ದೈವಿ.
ಸುನೀತಾ ರಾಠೋಡ ಮನೆಯ ಹೊರಗೆ ಇದ್ದ ವೇಳೆ ಜೋರಾದ ಗಾಳಿ ಬೀಸಿದ್ದು, ಮೇಲ್ಛಾವಣಿ ತಗಡು ಹಾರಿ ಬಿದ್ದು, ತೀವ್ರವಾಗಿ ಪೆಟ್ಟಾಗಿ ಅಸುನೀಗಿದ್ದಾರೆ.
ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.