ಹೊಸದಿಗಂತ ವರದಿ, ಮೈಸೂರು:
ಮೈಸೂರು ಜಿಲ್ಲೆಯ ನಂಜನಗೂಡುನಲ್ಲಿರುವ ಧಾರ್ಮಿಕ ಪುಣ್ಯಕ್ಷೇತ್ರ ಸಂಗಮ ಬಳಿ ಇರುವ ಶ್ರೀ ಮಹದೇವತಾತ ಗದ್ದುಗೆ ಪೂಜೆಗೆ ಬಂದ ಮಹಿಳೆಯೊಬ್ಬರು ಕಪಿಲ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮದ ನಂಜಪ್ಪ ಸ್ವಾಮಿ ಎಂಬವರ ಪತ್ನಿ ಶಕುಂತಲಾ (46)ಮೃತ ದುರ್ದೈವಿ.
ಇವರು ಧಾರ್ಮಿಕ ಪುಣ್ಯಕ್ಷೇತ್ರವಾಗಿರುವ ಮಹದೇವ ತಾತ ಗದ್ದಿಗೆ ಪೂಜಿ ಸಲ್ಲಿಸಲು ಕುಟುಂಬ ಸಮೇತ ಬಂದಿದ್ದರು. ಪೂಜೆಗೆ ತೆರಳುವ ಮುನ್ನ ಕಾಲು ತೊಳೆಯಲು ನದಿಗೆ ಇಳಿದಾಗ, ಕಾಲು ಜಾರಿ ಬಿದ್ದು ನೀರು ಪಾಲಾದರು. ಈ ಬಗ್ಗೆ ಹುಲ್ಲಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.