ಮೈಸೂರಲ್ಲಿ ಕೆಲಸ ಮಾಡಿದ್ದೇನೆ, ಈ ಬಾರಿ ಕೊಡಗಿನ ಋಣ ತೀರಿಸ್ತೀನಿ: ಪ್ರತಾಪ್‌ ಸಿಂಹ ಭಾವುಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ಲೋಕಸಭೆ ಚುನಾವಣೆಗೆ ಟಿಕೆಟ್ ಸಿಗುವ ಬಗ್ಗೆ ಅನುಮಾನವಿದೆ ಎಂದು ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್ ಲೈವ್‌ನಲ್ಲಿ ಸಾಕಷ್ಟು ಆತಂಕ ವ್ಯಕ್ತಪಡಿಸಿ ಭಾವುಕರಾದರು.

ಮೈಸೂರಿನಲ್ಲಿ ರಾಜಕೀಯ ಬಹಳ ಸಂಕೀರ್ಣವಾಗಿದೆ. 1989 ರಿಂದ ಮೈಸೂರಿನಲ್ಲಿ ಸತತ ಎರಡನೇ ಬಾರಿಗೆ ಯಾರೂ ಗೆದ್ದಿಲ್ಲ ಅಂತ ಜನರು ನನ್ನನ್ನು ಎರಡು ಬಾರಿ ಗೆಲ್ಲಿಸಿದ್ದಾರೆ. ಮೈಸೂರಿನಲ್ಲಿ ರಾಜವಂಶಸ್ಥರನ್ನು ಎರಡು ಬಾರಿ ಸೋತಿದ್ದರು. ಆದರೆ 40 ವರ್ಷಗಳಲ್ಲಿ ನನ್ನನ್ನು ಮಾತ್ರ ಸತತ ಎರಡು ಬಾರಿ ಗೆಲ್ಲಿಸಿದ್ದಾರೆ ಜನ ಎಂದರು.

ಮಾಧ್ಯಮಗಳಲ್ಲಿ ನನಗೆ ಟಿಕೆಟ್ ಸಿಗಲ್ಲ ಅಂತಿದ್ದಾರೆ. ಆದರೆ ನನ್ನ ಟಿಕೆಟ್ ಬಗ್ಗೆ ಚಾಮುಂಡೇಶ್ವರಿ ತಾಯಿ ನಿರ್ಧಾರ ಮಾಡುತ್ತಾರೆ. ನಾನು ಅದನ್ನು ಈ ತಾಯಿಗೆ ಬಿಟ್ಟಿದ್ದೇನೆ. ಟಿಕೆಟ್ ಕೊಟ್ಟರೆ 3 ಲಕ್ಷ ಅಂತರದಿಂದ ಗೆಲ್ಲುತ್ತೇನೆ. ಕಾರ್ಯಕರ್ತರು ಕೂಡ ನನ್ನ ಪರ ಇದ್ದಾರೆ. ಈಶ್ವರಪ್ಪ ಅವರು ಮತಗಟ್ಟೆಗೆ ಬಂದಾಗ ಕಾರ್ಯಕರ್ತರು ನನ್ನ ಹೆಸರನ್ನು ಸೂಚಿಸಿದ್ದಾರೆ ಎಂದು ಭಾವುಕ ಮಾತುಗಳನಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!