ಹೊಸದಿಗಂತ ಡಿಜಿಟಲ್ ಡೆಸ್ಕ್ :
ವಿಶ್ವ ಅರಣ್ಯ ದಿನವನ್ನು ಮಾರ್ಚ್ 21ರಂದು ಆಚರಣೆ ಮಾಡಲಾಗುತ್ತದೆ. ಈ ದಿನದಂದು ಜನರಲ್ಲಿ ಪರಿಸರ ರಕ್ಷಣೆ ಜೊತೆಗೆ ಅರಣ್ಯವನ್ನು ಉಳಿಸಿ ಸಂರಕ್ಷಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಈ ವಿಶೇಷ ದಿನದಂದು ಕನ್ನಡದ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ವಿಶ್ವ ಅರಣ್ಯ ದಿನದ ಅಂಗವಾಗಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ಟರ್ ನಲ್ಲಿ “ವಿಶ್ವ ಅರಣ್ಯ ದಿನ, ಕಾಡು ಬೆಳೆಸಿ ನಾಡು ಉಳಿಸಿ, ಹಸಿರೇ ಉಸಿರು.. ಮರ ಇದ್ದರೆ ಮಳೆ.. ಮಳೆ ಇದ್ದರೆ ಬೆಳೆ.. ಬೆಳೆ ಇದ್ದರೆ ನಮ್ಮೆಲ್ಲರ ಬದುಕು. ಅರಣ್ಯ ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ” ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
ವಿಶ್ವ ಅರಣ್ಯ ದಿನ
ಕಾಡು ಬೆಳೆಸಿ ನಾಡು ಉಳಿಸಿ
ಹಸಿರೇ ಉಸಿರು
ಮರ ಇದ್ದರೆ ಮಳೆ
ಮಳೆ ಇದ್ದರೆ ಬೆಳೆ
ಬೆಳೆ ಇದ್ದರೆ ನಮ್ಮೆಲ್ಲರ ಬದುಕು
ಅರಣ್ಯ ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ#InternationalForestDay#Forestday pic.twitter.com/nzBBq4YXws— Darshan Thoogudeepa (@dasadarshan) March 21, 2023
ನಟ ದರ್ಶನ್ಗೆ ಕಾಡು-ಮೇಡು, ಪ್ರಾಣಿ-ಪಕ್ಷಿಗಳು ಅಂದರೆ ಬಲು ಪ್ರೀತಿ ಅನ್ನೋದು ಗೊತ್ತೇ ಇದೆ. ಈ ಕಾರಣಕ್ಕೆ ಕರ್ನಾಟಕದ ಅರಣ್ಯ ಇಲಾಖೆ ರಾಯಭಾರಿಯನ್ನಾಗಿ ಮಾಡಿತ್ತು. ಅಲ್ಲದೆ ಇತ್ತೀಚೆಗೆ ಕೃಷಿ ಇಲಾಖೆಗೂ ಚಾಲೆಂಜಿಂಗ್ ಸ್ಟಾರ್ ರಾಯಭಾರಿಯಾಗಿ ಆಯ್ಕೆ ಆಗಿದ್ದರು.