April 10, 2026
Friday, April 10, 2026
spot_img

ನಿಮ್ಮ ಮಗನನ್ನು ಹಣ ವಸೂಲಿಗೆ ನೇಮಕಮಾಡಿದ್ದೀರಿ: ಸಿಎಂ ವಿರುದ್ಧ ಕುಟುಂಬ ರಾಜಕಾರಣದ ಮೇಲೆ ಹೆಚ್‌ಡಿಕೆ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕುಟುಂಬ ರಾಜಕಾರಣ ಮತ್ತು ಅಧಿಕಾರ ಬಳಕೆ ವಿಚಾರದಲ್ಲಿ ಸಿಎಂಗೆ ನೇರ ಟಾಂಗ್ ನೀಡಿದ ಅವರು, ತಮ್ಮ ಮಗನನ್ನು ಹಣ ವಸೂಲಿಗಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ:

ಸಿಎಂ ಪುತ್ರನ ಬಗ್ಗೆ ಮಾತನಾಡಿದ ಹೆಚ್‌ಡಿಕೆ, ಅಧಿಕಾರ ವಲಯದಲ್ಲಿರುವವರಿಗೆ ಎಲ್ಲವೂ ಗೊತ್ತಿದೆ ಎಂದು ಪರೋಕ್ಷ ಟೀಕೆ ಮಾಡಿದರು. ನಾನು ನನ್ನ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಜನರ ನಿರೀಕ್ಷೆ ಮತ್ತು ರಾಜಕೀಯ ಅವಶ್ಯಕತೆಯಂತೆ ಸಾರ್ವಜನಿಕ ಜೀವನಕ್ಕೆ ತಂದಿದ್ದೇನೆ ಎಂದು ಹೇಳಿದರು.

2006ರಲ್ಲಿ ಪಕ್ಷ ಬದಲಾವಣೆ ಮತ್ತು ಅಹಿಂದ ರಾಜಕಾರಣದ ವಿಚಾರವನ್ನೂ ಮುಂದಿಟ್ಟ ಹೆಚ್‌ಡಿಕೆ, ಸಿದ್ದರಾಮಯ್ಯ ಅವರ ರಾಜಕೀಯ ನಡೆಗಳನ್ನು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದ ಒಳರಾಜಕೀಯದಲ್ಲಿಯೂ ಅಸಮಾಧಾನ ಇದೆ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಬಹುದು ಎಂಬ ಸುಳಿವನ್ನೂ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !