July 17, 2026
Friday, July 17, 2026
spot_img

ನಾಯಿ ಕಚ್ಚಿದ ಮೂರು ತಿಂಗಳ ಬಳಿಕ ಯುವಕ ರೇಬೀಸ್‌ಗೆ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಾಯಿ ಕಚ್ಚಿದ್ದನ್ನು ನಿರ್ಲಕ್ಷಿಸಿದ ಪರಿಣಾಮ 31ರ ಯುವಕ ರೇಬೀಸ್‌ಗೆ ಬಲಿಯಾದ ದಾರುಣ ಘಟನೆ ಬೆಳಕಿಗೆ ಬಂದಿದೆ. ಕಾವಲ್ ಕಿನಾರು ಪ್ರದೇಶದ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಅಯ್ಯಪ್ಪನ್ ಎಂಬ ಯುವಕನಿಗೆ ಮೂರು ತಿಂಗಳ ಹಿಂದೆ ನಾಯಿ ಕಚ್ಚಿತ್ತು. ಗಾಯ ಸಣ್ಣದಾಗಿದ್ದ ಕಾರಣ, ಅವರು ಚಿಕಿತ್ಸೆ ಪಡೆಯದೇ ನಿರ್ಲಕ್ಷಿಸಿದರು. ಆದರೆ ಈ ನಿರ್ಲಕ್ಷ್ಯವೇ ಕೊನೆಗೂ ಜೀವ ತೆತ್ತು ಬೆಲೆ ಕೊಡಬೇಕಾಯಿತು.

ಅಯ್ಯಪ್ಪನ್ ಅವರನ್ನು ಅಸರಿಪಲ್ಲಂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ತಲುಪಿಸುವಷ್ಟರಲ್ಲಿ, ಅವರಿಗೆ ರೇಬೀಸ್‌ನ ಎಲ್ಲಾ ಗಂಭೀರ ಲಕ್ಷಣಗಳು ಕಾಣಿಸಿಕೊಂಡಿದ್ದವು. ನುಂಗಲು ಕಷ್ಟ, ಭಯದ ಪ್ರತಿಕ್ರಿಯೆಗಳು, ಅಶಾಂತಿ ಇವು ರೇಬೀಸ್‌ನ ಅಂತಿಮ ಹಂತದ ಸೂಚನೆಗಳಾಗಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪ್ರಯತ್ನಿಸಿದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಈ ಘಟನೆ ತಮಿಳುನಾಡಿನಲ್ಲಿ ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಅಭಿಯಾನ ಜಾರಿಯಲ್ಲಿರುವ ಸಂದರ್ಭದಲ್ಲೇ ನಡೆದಿದೆ ಎಂಬುದು ಗಮನಾರ್ಹ. ನಾಯಿ ಕಚ್ಚಿದ ಕ್ಷಣದಿಂದಲೇ ಅಪಾಯ ಶುರುವಾಗುತ್ತದೆ, ಆದರೆ ಗಾಯವನ್ನು ತಕ್ಷಣ ತೊಳೆಯುವುದು ಮತ್ತು PEP ಲಸಿಕೆ ಪಡೆದರೆ ರೇಬೀಸ್ ಅನ್ನು 100% ತಡೆಗಟ್ಟಬಹುದು. ಒಂದು ಬಾರಿ ರೇಬೀಸ್ ಲಕ್ಷಣಗಳು ಕಾಣಿಸಿಕೊಂಡ ನಂತರ ಜೀವಿತಾವಧಿ 7–14 ದಿನಗಳಷ್ಟೇ ಉಳಿಯುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !