ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೌರ್ಜನ್ಯ, ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪ ಹಿನ್ನೆಲೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ (BV Srinivas) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಯನ್ನು ಬೆಂಗಳೂರಿನ ಸಿಸಿಹೆಚ್ 72ರ ಜಡ್ಜ್ ಕೆ.ಎಸ್.ಜ್ಯೋತಿಶ್ರೀ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.

ಇದರಿಂದ ಶ್ರೀನಿವಾಸ್​ಗೆ ಬಂಧನ ಭೀತಿ ಶುರುವಾಗಿದೆ.

ಅಸ್ಸಾಂನ ಕಾಂಗ್ರೆಸ್ ನಾಯಕಿ ಅಂಕಿತಾ ದತ್ತಾ ದೂರು ನೀಡಿದ್ದರು. ಮ್ಯಾಜಿಸ್ಟ್ರೇಟ್ ಮುಂದೆ ಯುವತಿ 164ರಡಿ ಹೇಳಿಕೆ ದಾಖಲಿಸಿದ್ದಾರೆ ಎಂದು ಯುವತಿ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದಮಂಡಿಸಿದ್ದರು. ಅಸ್ಸಾಂ ಪೊಲೀಸರ ಪರ ಅಲ್ಲಿನ ಎಸ್​ಪಿಪಿ ವಾದಿಸಿದ್ದರು. ಹಾಗಾಗಿ ಬಿ.ವಿ.ಶ್ರೀನಿವಾಸ್​ಗೆ ನಿರೀಕ್ಷಣಾ ಜಾಮೀನನ್ನು ಕೋರ್ಟ್​ ನಿರಾಕರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!