ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಕನೊಬ್ಬ ತನ್ನ ಹುಟ್ಟುಹಬ್ಬದ ಕೇಕ್ ಅನ್ನು ತಲ್ವಾರ್ ನಿಂದ ಕತ್ತರಿಸುತ್ತಿದ್ದ ಘಟನೆ ವಿಜಯಪುರದ ಪೇಟಿ ಬಾವಡಿಯಲ್ಲಿ ನಡೆದಿದೆ.
ಅಮನ್ ಲೋನಿ ತಲ್ವಾರ್ ಕೇಕ್ ಕಟ್ ಮಾಡಿದ ಯುವಕ. ಅಮನ್ ಲೋಣಿಗೆ ರೌಡಿ ಶೀಟರ್ ಮಹ್ಮದ್ ಸಾಜೀದ್ ಇನಾಮದಾರ್ ಸಾಥ್ ನೀಡಿದ್ದಾನೆ.
ಸದ್ಯ ಈ ಘಟನೆ ಚರ್ಚೆಯಲ್ಲಿದ್ದು. ಸದ್ಯ ಗೋಲಗುಂಬಜ್ ಪೊಲೀಸರು ಅಮನ್ ಲೋಣಿ ಹಾಗೂ ರೌಡಿ ಶೀಟರ್ ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಇಬ್ಬರೂ ಮುಚ್ಚಳಿಕೆ ಪತ್ರ ಬರೆದು ಕಳುಹಿಸಿದ್ದಾರೆ. ಗೋಲಗುಂಬಜ್ ಪೊಲೀಸ್ ಠಾಣೆ ಬಳಿ ಘಟನೆ ನಡೆದಿದೆ.