ಯುವಕನ ಬಬ೯ರ ಕೊಲೆ ಪ್ರಕರಣ: ಪೋಲಿಸರಿಂದ ಆರೋಪಿ ಬಲಗಾಲಿಗೆ ಫೈರ್

ಹೊಸದಿಗಂತ ವರದಿ ,ಕಲಬುರಗಿ:

ಹಾಡುಹಗಲೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬಬ೯ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಯ ಬಲಗಾಲಿಗೆ ಫೈರ್ ಮಾಡಿದ್ದಾರೆ.

ಆರೋಪಿ ಮಂಜುನಾಥ ಸ್ವಾಮಿಯನ್ನು ಪೋಲಿಸರು ಬಂಧಿಸುವಾಗ ಎಕಾಎಕಿ ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದಾಗ,ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿ ಬಲಗಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಇನ್ನೂ ಬಲಗಾಲಿಗೆ ಗುಂಡು ಹಾರಿಸಿದ ಪರಿಣಾಮವಾಗಿ ಮಂಜುನಾಥ್ ಸ್ವಾಮಿ ಅವರನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,ಘಟನೆಯಲ್ಲಿ ಗಾಯಗೊಂಡ ಪೇದೆ ಸಿದ್ರಾಮಯ್ಯಾ ಸ್ವಾಮಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಶಾಂತ್ ಕುಂಬಾರ 30 ಎಂಬ ಯುವಕನ ಮೇಲೆ ಮಂಜುನಾಥ್ ಸ್ವಾಮಿ ಕಲ್ಲು ಎತ್ತಿ ಹಾಕಿ,ಪರಾರಿಯಾದ್ದನು.ಈ ಸಂಬಂಧ ಕಲಬುರಗಿ ಚೌಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!