ಹೊಸ ದಿಗಂತ ವರದಿ, ಬೀದರ್:
ಗುರುವಾರ, ಶುಕ್ರವಾರ ಬೀದರ್ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಕಾಲಿಕವಾಗಿ ಒಂದು ಗಂಟೆಗಳಕಾಲ ಸುರಿದ ಮಳೆಯಿಂದ ವಾತಾವರಣ ತಂಪುಗೊಂಡಿತು ಆದರೆ ಮಳೆಯ ಅಬ್ಬರಕ್ಕೆ ಮಾವಿನ ಬೆಳೆಗೆ ಹೊಡೆತ ಬಿದ್ದಿದೆ, ಅರ್ಧ ಬೆಳೆದಿದ್ದ ಮಾವು ಮಳೆಯ ಕಾರಣ ನೆಲಕ್ಕುರುಳಿ ರೈತರಿಗೆ ಹಾನಿಯುಂಟಾಗಿದೆ.
ಬೀದರ್ ತಾಲೂಕಿನ ಯರನಳ್ಳಿ ಗ್ರಾಮದಲ್ಲಿ ದೊಡ್ಡ ಮೊಲೆವೊಂದು ರಸ್ತೆಯ ಮೇಲೆ ಸಂಚರಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ ಹಾಗೂ ಇನ್ನೋಂದು ಮರ ಆಟೋ ರಿಕ್ಷಾ ಮೇಲೆ ಬಿದ್ದ ಕಾರಣ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.