ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಏಳರಿಂದ 10 ದಿನಗಳ ಕಾಲಾವಕಾಶ ನೀಡುತ್ತಿರುವುದಾಗಿ ಭಾರತೀಯ ಕಿಸಾನ್ ಯೂನಿಯನ್ (BKU) ಮುಖಂಡ ರಾಕೇಶ್ ಟಕಾಯತ್ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕುಸ್ತಿಪಟುಗಳ ಸಮಸ್ಯೆಗೆ ಸಂಬಂಧಿಸಿದ ಆಂದೋಲನದಲ್ಲಿ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಹರ್ಯಾಣದ ಕುರುಕ್ಷೇತ್ರದಲ್ಲಿ ಖಾಪ್ ಮಹಾಪಂಚಾಯತ್ ನಡೆದ ನಂತರ ರೈತರ ಮುಖಂಡರು ಈ ಘೋಷಣೆ ಮಾಡಿದರು.
ಹರ್ಯಾಣದಿಂದ ಕೇಂದ್ರ ಸರ್ಕಾರಕ್ಕ ಒಂದು ದೊಡ್ಡ ಸಂದೇಶವನ್ನು ಇಲ್ಲಿಂದ (ಕುರುಕ್ಷೇತ್ರದಲ್ಲಿ ಖಾಪ್ ಪಂಚಾಯತ್) ರವಾನಿಸಬೇಕು. ಸಿಂಗ್ ವಿರುದ್ದ ಕ್ರಮ ಕೈಗೊಳ್ಳಲು ಅವರಿಗೆ 7-10 ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ಹೇಳಿದ್ದಾರೆ.
ಕುಸ್ತಿಪಟುಗಳ ಕುಂದುಕೊರತೆಗಳನ್ನು ಸರ್ಕಾರ ಪರಿಹರಿಸಬೇಕು ಮತ್ತು ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧಿಸಬೇಕು, ಇಲ್ಲದಿದ್ದರೆ ನಾವು ಜೂನ್ 9 ರಂದು ದೆಹಲಿಯ ಜಂತರ್ ಮಂತರ್ಗೆ ಕುಸ್ತಿಪಟುಗಳೊಂದಿಗೆ ಹೋಗುತ್ತೇವೆ. ರಾಷ್ಟ್ರದಾದ್ಯಂತ ಪಂಚಾಯಿತಿಗಳನ್ನು ನಡೆಸುತ್ತೇವೆ ಎಂದು ನಾವು ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ರೈತ ಸಂಘಟನೆಗಳು ಉತ್ತರ ಪ್ರದೇಶದ ಮುಜಾಫರ್ನಗರದ ಸೊರಮ್ ಗ್ರಾಮದಲ್ಲಿ ಹಲವು ಗಂಟೆಗಳ ಕಾಲ ನಡೆದ ‘ಖಾಪ್ ಮಹಾಪಂಚಾಯತ್’ ಮತ್ತು ಪಂಜಾಬ್ ಮತ್ತು ಹರ್ಯಾಣದಲ್ಲಿ ಗುರುವಾರ ಸರಣಿ ಪ್ರತಿಭಟನೆಗಳು, ಕುಸ್ತಿಪಟುಗಳಿಗೆ ಒಗ್ಗಟ್ಟು ಪ್ರದರ್ಶಿಸಿದ ಒಂದು ದಿನದ ನಂತರ ಸಭೆ ನಡೆಯಿತು.