BIG NEWS | ಒಡಿಶಾದಲ್ಲಿ ಸಿಡಿಲು ಬಡಿದು 12 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದಲ್ಲಿ ಸಿಡಿಲು ಬಡಿತದಿಂದ 12 ಮಂದಿ ಮೃತಪಟ್ಟಿದ್ದಾರೆ. ಸಿಡಿಲು ಬಡಿತದಿಂದ 14 ಮಂದಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಖುರ್ದಾ ಜಿಲ್ಲೆಯಲ್ಲಿ ನಾಲ್ವರು, ಬೋಲಂಗೀರ್‌ನಲ್ಲಿ ಇಬ್ಬರು, ಅಂಗುಲ್, ಬೌದ್ಧ್, ಜಗತ್‌ಸಿಂಗ್‌ಪುರ, ಧೆಂಕನಾಲ್, ಭುವನೇಶ್ವರ ಹಾಗೂ ಕಟಕ್‌ನಲ್ಲಿ ತಲಾ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಭುವನೇಶ್ವರ್ ಹಾಗೂ ಕಟಕ್ ಸೇರಿದಂತೆ ಒಡಿಶಾದ ಕರಾವಳಿ ಪ್ರದೇಶದಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಇನ್ನೂ ನಾಲ್ಕು ದಿನಗಳು ಇದೇ ರೀತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭುವನೇಶ್ವರ್ ಹಾಗೂ ಕಟಕ್‌ನಲ್ಲಿ ಹೆಚ್ಚು ಮಳೆಯಾಗಿದ್ದು, ಮಧ್ಯಾಹ್ನ ಒಂದೂವರೆ ಗಂಟೆ ಸುರಿದ ಮಳೆಗೆ ಇಡೀ ಜಿಲ್ಲೆಗಳೇ ಹೈರಾಣಾಗಿವೆ. 126 ಮಿ.ಮೀಯಷ್ಟು ಮಳೆಯಾಗಿವೆ. ಇನ್ನು ಗಜಪತಿ ಹಾಗೂ ಕಂಧಮಾಲ್ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಎಂಟು ಜಾನುವಾರುಗಳು ಮೃತಪಟ್ಟಿದೆ.

ಶನಿವಾರ ಅತೀ ಹೆಚ್ಚು ಬಾರಿ ಸಿಡಿಲು ಬಡಿದಿದ್ದು, ಎರಡು ಗಂಟೆಯಲ್ಲಿ 61 ಸಾವಿರ ಬಾರಿ ಸಿಡಿಲು ಬಡಿದಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!