ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ನೌಕಾಪಡೆ ಇಂದು ಮುಂಜಾನೆ ತಮಿಳುನಾಡು ಮೂಲದ 16 ಮೀನುಗಾರರನ್ನು ಬಂಧಿಸಿದೆ.
ಈ ಬಗ್ಗೆ ತಮಿಳುನಾಡಿನ ಕ್ಯೂ ಬ್ರಾಂಚ್ ಪೊಲೀಸರು ಮಾಹಿತಿ ನೀಡಿದ್ದು, ರಾಮೇಶ್ವರಂನ 16 ಮೀನುಗಾರರು ಬಂಧಿಸಿದ್ದಾರೆ ಎಂದಿದ್ದಾರೆ.
ಶ್ರೀಲಂಕಾ ನೌಕಾಪಡೆಯು ಡೆಲ್ಫ್ ದ್ವೀಪದ ಬಳಿ ಮುಂಜಾನೆ ಎರಡು ಗಂಟೆ ವೇಳೆ 16 ಮೀನುಗಾರರನ್ನು ಬಂಧಿಸಿದ್ದು, ಮೂರು ಬೋಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.