ಕಾಂಗ್ರೆಸ್‌ ಗೆ ಬಂದ 1600 ಕೋಟಿ ರೂ. ಹಣ ಏನು?: ಹಫ್ತಾ ವಸೂಲಿ ಆರೋಪಕ್ಕೆ ಅಮಿತ್‌ ಶಾ ತಿರುಗೇಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚುನಾವಣಾ ಬಾಂಡ್‌ ಮೂಲಕ ಬಿಜೆಪಿ ‘ಹಫ್ತಾ ವಸೂಲಿ’ ಮಾಡಿದೆ ಎಂದು ರಾಹುಲ್‌ ಗಾಂಧಿ (Rahul Gandhi) ಆರೋಪಕ್ಕೆ ಗೃಹ ಸಚಿವ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ.

ಚುನಾವಣಾ ಬಾಂಡ್‌ಗಳು (Electoral Bonds) ರಾಜಕೀಯದಲ್ಲಿ ಕಪ್ಪುಹಣವನ್ನು (Black Money) ಬಹುತೇಕ ಅಂತ್ಯಗೊಳಿಸಿತ್ತು. ಇದಕ್ಕಾಗಿಯೇ ರಾಹುಲ್ ಗಾಂಧಿ, ಇಡೀ INDIA ಒಕ್ಕೂಟ ಬಾಂಡ್‌ ವಿರುದ್ಧವಾಗಿತ್ತು ಮತ್ತು ಮತ್ತೊಮ್ಮೆ ರಾಜಕೀಯವನ್ನು (Politics) ಆಳಲು ಹಳೆಯ ವ್ಯವಸ್ಥೆಯನ್ನು ಅವರು ಬಯಸಿದ್ದರು ಎಂದು ಶಾ ತಿರುಗೇಟು ನೀಡಿದರು.

ಕಾಂಗ್ರೆಸ್‌ 1600 ಕೋಟಿ ರೂ. ಹಣವನ್ನು ಚುನವಾಣಾ ಬಾಂಡ್‌ನಿಂದ ಪಡೆದುಕೊಂಡಿದೆ. ನಾವು ಇದನ್ನು ಪಾರದರ್ಶಕ ದೇಣಿಗೆ ಎಂದು ಭಾವಿಸುತ್ತೇವೆ. ನಮ್ಮದನ್ನು ಅವರು ಅವರು ಹಫ್ತಾ ವಸೂಲಿ ಎಂದು ಆರೋಪಿಸಿದರೆ ಅವರ ಹಣ ಏನು? ಎಂದು ಅಮಿತ್‌ ಶಾ ಪ್ರಶ್ನಿಸಿದರು.

ಬಿಜೆಪಿಯು ತಮ್ಮ ದಾನಿಗಳ ಪಟ್ಟಿಯನ್ನು ಬಹಿರಂಗಪಡಿಸುತ್ತದೆಯೇ ಎಂಬ ಪ್ರಶ್ನೆಗೆ, ಶಾ , ನಾನು ನಿಮಗೆ ಭರವಸೆ ನೀಡುತ್ತೇನೆ ಬಾಂಡ್‌ ವಿವರಗಳು ಪ್ರಕಟವಾದ ನಂತರ INDIA ಮೈತ್ರಿಕೂಟವು ಜನರನ್ನು ಎದುರಿಸಲು ಕಷ್ಟವಾಗಬಹುದು ಎಂದು ಹೇಳಿದರು.

ಭಾರತೀಯ ರಾಜಕೀಯದಲ್ಲಿ ಕಪ್ಪು ಹಣದ ಪ್ರಾಬಲ್ಯವನ್ನು ಕೊನೆಗೊಳಿಸಲು ಚುನಾವಣಾ ಬಾಂಡ್‌ ಪರಿಚಯಿಸಲಾಯಿತು. ಚುನಾವಣೆಯಲ್ಲಿ ಸುಧಾರಣೆ ತರಲು ತಂದಿದ್ದೆವು. ಆದರೆ ಸುಪ್ರೀಂ ಕೋರ್ಟ್‌ ಈಗ ಚುನಾವಣಾ ಬಾಂಡ್‌ ಅನ್ನು ರದ್ದುಗೊಳಿಸಿದೆ. ಈಗ ಇದಕ್ಕೆ ಯಾವುದೇ ಮಹತ್ವ ಇಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!