ಆಕಾಶವೇ ಕಳಚಿ ಬಿದ್ದಂತಾಯಿತು..: ಆಸ್ಪತ್ರೆಯಲ್ಲಿ ಸದ್ಗುರನ್ನು ಭೇಟಿಯಾಗಿ ಭಾವುಕರಾದ ನಟಿ ಕಂಗನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಗ್ಗಿ ವಾಸುದೇವ್ ಅವರು ಮೆದುಳು ಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ದೇಶ ವಿದೇಶದಿಂದ ಗಣ್ಯರು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

ಇತ್ತ ಜಗ್ಗಿ ವಾಸುದೇವ್ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸುದ್ದಿ ತಿಳಿಯುತ್ತಿದ್ದಂತೆಯೇ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಇಂದು ಸದ್ಗುರು ಅವರನ್ನು ಭೇಟಿ ಮಾಡಿದ ಕಂಗನಾ, ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಐಸಿಯು ಬೆಡ್ ಮೇಲೆ ಸದ್ಗುರು ನೋಡಿದೆ. ಆಕಾಶವೇ ಕಳಚಿ ಬಿದ್ದಂತಾಯಿತು. ನನ್ನ ತಲೆ ತಿರುಗಿತು. ದೇವರೇ ಕುಸಿದಂತೆ ಭಾಸವಾಯಿತು ಎಂದು ಬರೆದುಕೊಂಡಿದ್ದಾರೆ.

ಲಕ್ಷಾಂತರ ಭಕ್ತರು ನನ್ನಂತೆಯೇ ದುಃಖವನ್ನು ಹಂಚಿಕೊಳ್ಳಲಿದ್ದಾರೆ. ಅವರು ಆರೋಗ್ಯವಾಗಿ ಮತ್ತೆ ನಮ್ಮೊಂದಿಗೆ ಇರಲಿದ್ದಾರೆ. ಹಾಗಾಗದೇ ಇದ್ದರೆ ಸೂರ್ಯ ಬೆಳಗಲ್ಲ, ಭೂಮಿ ಚಲಿಸುವುದಿಲ್ಲ ಎಂದು ಭಾವುಕರಾಗಿಯೇ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಬುಧವಾರ ಸದ್ಗುರು ಜಗ್ಗಿ ವಾಸುದೇವ್ ( Sadhguru Jaggi Vasudev) ಅವರು ಆಸ್ಪತ್ರೆಗೆ ದಾಖಲಾಗಿದ್ದರು. 66 ವರ್ಷದ ಸದ್ಗುರು ಮೆದುಳಿನಲ್ಲಿ ‌ಭಾರೀ ಊತ ರಕ್ತಸ್ರಾವ ಉಂಟಾಗಿದ್ದು, ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಾಗಿದ್ದರು. ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ (Emergency brain surgery) ನಡೆಸಲಾಗಿದ್ದು, ಆರೋಗ್ಯ ಸುಧಾರಿಸುತ್ತಿದೆ ಎಂದು ಇಶಾ ಫೌಂಡೇಶನ್‌ ಸಾಮಾಜಿಕ ಜಾಲತಾಣದ ಖಾತೆಯಿಂದ ಸ್ಪಷ್ಟನೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!