ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಬಡವರಿಗಾಗಿ ಕಡಿಮೆ ದರದಲ್ಲಿ ಉತ್ತಮ ಆಹಾರ ದೊರಕುವ ಇಂದಿರಾ ಕ್ಯಾಂಟೀನ್ಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಈ ವರ್ಷ ಒಟ್ಟಾರೆ 188 ಇಂದಿರಾ ಕ್ಯಾಂಟೀನ್ ತೆರೆಯಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಬಿಜೆಪಿಯವರು ಅಧಿಕಾರಕ್ಕೆ ಬಂದಾಗ ಇಂದಿರಾ ಕ್ಯಾಂಟೀನ್ ನಿಲ್ಲಿಸಿದ್ದರು. ಎಷ್ಟೊಂದು ಬಡವರು ಇಲ್ಲಿ ಊಟ ಮಾಡುತ್ತಾರೆ, ಅದರ ಬಗ್ಗೆ ಅವರಿಗೆ ಗಮನ ಇಲ್ಲ. ನಾವು ಪ್ರತೀ ಶಾಸಕರಿಗೂ ಐವತ್ತು ಕೋಟಿ ಕೊಡುತ್ತೇವೆ, ಅಭಿವೃದ್ಧಿ ಕೆಲಸ ಮಾಡುತ್ತೇವೆ. ನಮ್ಮ ಕೆಲಸ ನೋಡಿ ಬಿಜೆಪಿಗೆ ಭಯ ಆಗಿದೆ ಎಂದಿದ್ದಾರೆ.